ADVERTISEMENT

ಸೀಮಾಂಧ್ರ ಬಂದ್: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 9:29 IST
Last Updated 5 ಸೆಪ್ಟೆಂಬರ್ 2013, 9:29 IST
ಸೀಮಾಂಧ್ರ ಬಂದ್: ಜನಜೀವನ ಅಸ್ತವ್ಯಸ್ತ
ಸೀಮಾಂಧ್ರ ಬಂದ್: ಜನಜೀವನ ಅಸ್ತವ್ಯಸ್ತ   

ಹೈದರಾಬಾದ್ (ಪಿಟಿಐ): ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆಯಾದಗಿನಿಂದ ಇಲ್ಲಿಯವರೆಗೂ ಸೀಮಾಂಧ್ರ ಮತ್ತು ಕರಾವಳಿ ಆಂಧ್ರ ಭಾಗದಲ್ಲಿ  ಜನಸಾಮಾನ್ಯರ ಜೀವನ ಸಂಪೂರ್ಣವಾಗಿ ಆಸ್ತವ್ಯಸ್ತವಾಗಿದೆ.

ಒಂದು ತಿಂಗಳಿನಿಂದ ಈ ಭಾಗಗಳಲ್ಲಿ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಮತ್ತು ವಾಣಿಜ್ಯ ಮಳಿಗೆಗಳು ಮುಚ್ಚಿವೆ . ಆಂಧ್ರ ಸಾರಿಗೆ ಸಂಸ್ಥೆಯು  ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಕೇವಲ 1,500 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಇಲ್ಲಿಯವರೆಗೂ 500ಕ್ಕೂ ಹೆಚ್ಚು ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ.

ಸುಮಾರು 4 ಲಕ್ಷ ಸರ್ಕಾರಿ ನೌಕಕರು 2 ಲಕ್ಷ ಶಿಕ್ಷಕರು ಕಚೇರಿ ಮತ್ತು ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಿದ್ದಾರೆ. ಸಾರಿಗೆ ವ್ಯತ್ಯಯದಿಂದ ಜನರು ಹೈರಾಣಾಗಿದ್ದಾರೆ. ಸುಮಾರು 15 ಲಕ್ಷಕ್ಕೂ ಹೆಚ್ಚು ದಿನಗೂಲಿ ನೌಕರರ ಜೀವನಕ್ಕೆ ತೀವ್ರ ತೊಂದರೆಯಾಗಿದೆ.

ಸೀಮಾಂಧ್ರ ಮತ್ತು ಕರಾವಳಿ ಆಂಧ್ರದ 13 ಜಿಲ್ಲೆಗಳಲ್ಲಿ ಜನಜೀವನ ಮೂರಾಬಟ್ಟೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT