ADVERTISEMENT

‘ಪೆಪ್ಪರ್‌ ಸ್ಪ್ರೇ’: ರಾಜಗೋಪಾಲ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2014, 19:30 IST
Last Updated 14 ಫೆಬ್ರುವರಿ 2014, 19:30 IST
‘ಪೆಪ್ಪರ್‌ ಸ್ಪ್ರೇ’: ರಾಜಗೋಪಾಲ್‌ ವಿಷಾದ
‘ಪೆಪ್ಪರ್‌ ಸ್ಪ್ರೇ’: ರಾಜಗೋಪಾಲ್‌ ವಿಷಾದ   

ನವದಹೆಲಿ (ಪಿಟಿಐ): ಲೋಕಸಭೆ­ಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆ ಮಂಡನೆ ವೇಳೆ ‘ಪೆಪ್ಪರ್‌ ಸ್ಪ್ರೇ’ ಮಾಡಿ ಕುಖ್ಯಾತರಾದ ವಿಜಯ­ವಾಡ ಸಂಸದ ಎಲ್‌. ರಾಜ­ಗೋಪಾಲ್‌ ತಮ್ಮ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಆತ್ಮ­ರಕ್ಷಣೆ­­ಗಾಗಿ ಹಾಗೆ ಮಾಡಿರುವುದಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

‘ಸಂಸತ್ತಿನಲ್ಲಿ ಗುರುವಾರ ನಡೆದಿ­ರು­ವುದು ಸರಿ ಎಂದು ನಾನು ಹೇಳುತ್ತಿಲ್ಲ. ಖಂಡಿತವಾಗಿಯೂ ನಾವೆಲ್ಲರೂ ವಿಷಾ­ದಿ­ಸುತ್ತೇವೆ. ಇದರಿಂದ ನಾಚಿಕೆಯಾಗಿದೆ’ ಎಂದಿದ್ದಾರೆ.

ಸಹೋದ್ಯೋಗಿ ಸಂಸದ­ರೊ­ಬ್ಬರ ಮೇಲೆ ರಾಜಕೀಯ ವಿರೋ­ಧಿ­ಗಳು ಹಲ್ಲೆ ನಡೆ­ಸಲು ಮುಂದಾದಾಗ ಅವ­­ರನ್ನು ರಕ್ಷಿ­­ಸ­ಲು ‘ಪೆಪ್ಪರ್‌ ಸ್ಪ್ರೇ’ ಮಾಡ­­ಬೇಕಾ­ಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.

‘ಆತ್ಮರಕ್ಷಣೆಗಾಗಿ ನಾನು ಏನಾ­ದರೂ ಮಾಡ­ಲೇಬೇಕಿತ್ತು. ಬಡಿದಾಟ­ದಲ್ಲಿ ತೊಡ­­­ಗುವು­ದಕ್ಕೆ ನನಗೆ ಮನಸಿರ­ಲಿಲ್ಲ. ಬೇರೊಂದು ಪಕ್ಷದ ಸಂಸದರೊ­ಬ್ಬರ ಮೇಲೆ ಹಲ್ಲೆ ನಡೆಯುವುದು ಕಂಡಾಗ ನಾನು ಸ್ಪ್ರೇ ಉಪಯೋಗಿಸಿದೆ’ ಎಂದು  ವಿವರಿಸಿದ್ದಾರೆ. ‘ಇಂತಹ ಶಕ್ತಿಗಳಿಂದ ಬೆದರಿಕೆ ಇರುವುದರಿಂದ ಸದಾ ಪೆಪ್ಪರ್‌ ಸ್ಪ್ರೇ ಜೊತೆಗೆ ಇರಿಸಿಕೊಳ್ಳುತ್ತೇನೆ’ ಎಂದೂ ರಾಜಗೋಪಾಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.