ADVERTISEMENT

‘ಮೋದಿ, ರಾಹುಲ್ ಇಬ್ಬರೂ ಅಂಬಾನಿ ಚಮಚಾಗಳು’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಲಖನೌ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ರಿಲಯನ್ಸ್ ಇಂಡ­ಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿಯವರ ‘ಚಮಚಾ’­ಗಳು ಎಂದು ಅರವಿಂದ ಕೇಜ್ರಿವಾಲ್‌ ವ್ಯಂಗ್ಯವಾಡಿದ್ದಾರೆ.

ಕಾನ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ‘ಮೋದಿ ಅಲೆ’ ಇದೆ ಎಂಬುದನ್ನು ನಿರಾಕರಿಸಿದ ಅವರು ಅದು ‘ಹಣ ನೀಡಿರುವ ಟಿವಿ ವಾಹಿನಿಗಳ ಸಮೀಕ್ಷೆಗಳಿಗೆ’ ಸೀಮಿತವಾಗಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಹೇಳಿ­ದರು.

ಬಿಜೆಪಿ ಸೋನಿಯ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವ­ರೊಡನೆ ಒಳ ಒಪ್ಪಂದ ಮಾಡಿಕೊಂ­ಡಿರುವಂತಿದೆ, ಹಾಗಾಗಿ ಬಿಜೆಪಿ ತಾನು ಅಧಿಕಾರ­ದಲ್ಲಿರುವ ರಾಜಸ್ತಾನದಲ್ಲಿ ವಾದ್ರ ಅವರ ಭೂಹಗರಣ ಕುರಿತು ಯಾವುದೇ ತನಿಖೆ ನಡೆಸಿಲ್ಲ ಎಂದು ಆರೋಪಿ­ಸಿದರು. ಕಾನ್ಪುರದಲ್ಲಿ ಕಾಂಗ್ರೆಸ್ ಕಾರ್ಯ­ಕರ್ತರು ಕೇಜ್ರಿವಾಲ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.