ADVERTISEMENT

₹12 ಕೋಟಿ ಲಾಟರಿ ಗೆದ್ದ ದಿನಗೂಲಿ ಕಾರ್ಮಿಕ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 11:07 IST
Last Updated 13 ಫೆಬ್ರುವರಿ 2020, 11:07 IST
ಕೇರಳ ರಾಜ್ಯ ಲಾಟರಿ ಗೆದ್ದ ಪೆರುನನ್‌ ರಾಜನ್‌
ಕೇರಳ ರಾಜ್ಯ ಲಾಟರಿ ಗೆದ್ದ ಪೆರುನನ್‌ ರಾಜನ್‌   

ತಿರುವನಂತಪುರ: ಹಲವು ಜನರ ಭವಿಷ್ಯವನ್ನೇ ಬದಲಿಸಿರುವ ಕೇರಳ ರಾಜ್ಯ ಲಾಟರಿ, ಈ ಬಾರಿ ಕಣ್ಣೂರು ಮೂಲದ ದಿನಗೂಲಿ ನೌಕರನೊಬ್ಬನಿಗೆ ಒಲಿದಿದೆ.

ಕಣ್ಣೂರು ನಗರದಿಂದ 40 ಕಿ.ಮೀ. ದೂರದಲ್ಲಿರುವ ಮಾಲೂರಿನ ಪೆರುನನ್‌ ರಾಜನ್‌ ಕ್ರಿಸ್‌ಮಸ್‌–ಹೊಸವರ್ಷದ ಬಂಪರ್‌ ಲಾಟರಿಯಲ್ಲಿ ₹ 12 ಕೋಟಿ ಗೆದ್ದುಕೊಂಡಿದ್ದು, ತೆರಿಗೆ ಕಡಿತದ ಬಳಿಕ ಅಂದಾಜು ₹7 ಕೋಟಿ ರಾಜನ್‌ ಕೈಸೇರಲಿದೆ. 58 ವರ್ಷದ ರಾಜನ್‌ ಆರ್ಥಿಕ ಸಂಕಷ್ಟದಲ್ಲಿರುವ ವೇಳೆಯೇ ಅದೃಷ್ಟ ಒಲಿದಿದೆ. ಇಬ್ಬರು ಹೆಣ್ಣುಮಕ್ಕಳ ಪೈಕಿ ಹಿರಿಯ ಮಗಳಿಗೆ ಮದುವೆ ಮಾಡಿದ್ದ ರಾಜನ್‌, ₹ 5 ಲಕ್ಷಕ್ಕೂ ಮೀರಿ ಸಾಲ ಮಾಡಿದ್ದರು.

‘ನನ್ನ ಬಳಿ ಹಣವಿದ್ದಾಗ ಲಾಟರಿ ಖರೀದಿಸುತ್ತಿದ್ದೆ. ಸಾಲದ ನಡುವೆ ₹300 ನೀಡಿ ಬಂಪರ್‌ ಲಾಟರಿ ಖರೀದಿಸಿದ್ದಕ್ಕೆ ಪತ್ನಿಯೂ ಅಸಮಾಧಾನಗೊಂಡಿದ್ದಳು. ಮೊದಲು ಸಾಲ ತೀರಿಸುತ್ತೇನೆ. ಉಳಿದ ಹಣವನ್ನು ಏನು ಮಾಡಬೇಕೆಂದು ಇನ್ನೂ ಯೋಚಿಸಿಲ್ಲ’ ಎಂದು ರಾಜನ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.