ADVERTISEMENT

2ನೇ ಹಸಿರು ಕ್ರಾಂತಿಗೆ ರಾಷ್ಟ್ರಪತಿ ಕರೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 17:55 IST
Last Updated 25 ಜನವರಿ 2011, 17:55 IST
2ನೇ ಹಸಿರು ಕ್ರಾಂತಿಗೆ  ರಾಷ್ಟ್ರಪತಿ ಕರೆ
2ನೇ ಹಸಿರು ಕ್ರಾಂತಿಗೆ ರಾಷ್ಟ್ರಪತಿ ಕರೆ   

ನವದೆಹಲಿ (ಐಎಎನ್‌ಎಸ್): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಂಗಳವಾರ ಇಲ್ಲಿ ‘ಬೆಲೆ ಏರಿಕೆಯನ್ನು ಗಂಭೀರ ವಿಷಯ’ವೆಂದು ಬಣ್ಣಿಸಿದ್ದು, ಆಹಾರ ಭದ್ರತೆ ಸಾಧಿಸಲು ‘ದ್ವಿತೀಯ ಹಸಿರು ಕ್ರಾಂತಿ’ಗೆ ಕರೆ ನೀಡಿದರು.

‘ಹೆಚ್ಚುತ್ತಿರುವ ಹಣದುಬ್ಬರ, ಅದರಲ್ಲೂ ವಿಶೇಷವಾಗಿ ಆಹಾರ ಸಾಮಗ್ರಿಗಳಲ್ಲಿನ ಬೆಲೆ ಏರಿಕೆ ಗಂಭೀರವಾದುದು’ ಎಂದು ಅವರು ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಕಳವಳ ವ್ಯಕ್ತಪಡಿಸಿದರು.‘ಆಹಾರ ಭದ್ರತೆಗಾಗಿ ಎರಡನೇ ಹಸಿರು ಕ್ರಾಂತಿಯ ಅಗತ್ಯವಿದ್ದು ಇದು ಮಳೆಯಾಧರಿತ ಕೃಷಿ ಪ್ರದೇಶಗಳನ್ನು ಕೇಂದ್ರೀಕರಿಸಿ ನಡೆಯಬೇಕು ಮತ್ತು ಯಾಂತ್ರೀಕೃತ ಕೃಷಿಗೆ ಒತ್ತು ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.