ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸರಣಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಲಷ್ಕರ್ ಎ–ತಯಬಾ(ಎಲ್ಇಟಿ) ಸದಸ್ಯ ಶೇಕ್ ಸಜಾದ್ ಅಲಿಯಾಸ್ ಸಜ್ಜದ್ ಗುಲ್ ಹಾಗೂ ಅಲ್ ಬದ್ರ್ ಸದಸ್ಯ ಅರ್ಜುಮಂದ್ ಗುಲ್ಜಾರ್ ದಾರ್ ಅಲಿಯಾಸ್ ಹಮ್ಜಾ ಬುಹ್ರಾನ್ನನ್ನು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಅಡಿ ಕೇಂದ್ರ ಸರ್ಕಾರವು ಉಗ್ರರ ಪಟ್ಟಿಗೆ ಸೇರಿಸಿದೆ.
ಗುಲ್ಜಾರ್ ದಾರ್ ಉಗ್ರರಿಗೆ ಹಣ ಒದಗಿಸುವುದರ ಜೊತೆಗೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದರೆ,ಸಜ್ಜದ್ ಗುಲ್ 2018ರಲ್ಲಿ ನಡೆದ ಪತ್ರಕರ್ತ ಸುಜಾತ್ ಬುಖಾರಿ ಹತ್ಯೆಯ ಪ್ರಕರಣದ ಪ್ರಮುಖ ಸಂಚುಕೋರ. ಇವರೂ ಸೇರಿದಂತೆ ಇದುವರೆಗೆ 38 ಮಂದಿಯನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರ ಕಳೆದ ಐದು ದಿನಗಳಲ್ಲಿ ಎಂಟು ಮಂದಿಯನ್ನು ಉಗ್ರರ ಪಟ್ಟಿಗೆ ಸೇರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.