ADVERTISEMENT

ಉಗ್ರರಿಗೆ ನೆರವು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 15:32 IST
Last Updated 28 ಏಪ್ರಿಲ್ 2022, 15:32 IST
   

ಶ್ರೀನಗರ: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ತೊಡಗಿ ಉಗ್ರರಿಗೆ ನೆರವಾದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಹಜಿತ್ರಾ ಕರ್ನ್ಹಾ ನಿವಾಸಿಗಳಾದ ಮೊಹಮ್ಮದ್‌ ಅಮಿರ್‌, ನಿಸಾರ್‌ ಅಹ್ಮದ್‌ ಹಾಗೂ ಸುಧ್‌ಪೋರಾ ಕರ್ನ್ಹಾದ ಕಫೀಲ್‌ ಅಹ್ಮದ್‌ ಬಂಧಿತರು.

‘ಕಣಿವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗೆ ಆರೋಪಿಗಳು ನೆರವಾಗುತ್ತಿದ್ದರು. ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದರು.ಬಂಧಿತರಿಂದ ಚೀನಾದ ಪಿಸ್ತೂಲ್‌, ಮ್ಯಾಗಜೀನ್‌ ಹಾಗೂ 14 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ವಕ್ತಾರರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.