ADVERTISEMENT

ಹಡಗಿನಲ್ಲಿ ಬೆಂಕಿ ಅವಘಡ; 26 ಮಂದಿ ರಕ್ಷಣೆ, ಸಮುದ್ರಕ್ಕೆ ತೈಲ ಸೋರಿಕೆಯಾಗಿಲ್ಲ

ಪಿಟಿಐ
Published 18 ಜನವರಿ 2018, 10:21 IST
Last Updated 18 ಜನವರಿ 2018, 10:21 IST
ಚಿತ್ರ: ಎಎನ್‌ಐ ಟ್ವೀಟ್
ಚಿತ್ರ: ಎಎನ್‌ಐ ಟ್ವೀಟ್   

ಅಹಮದಾಬಾದ್: ಗುಜರಾತ್‌ ಕರಾವಳಿಯ ಅರಬ್ಬಿ ಸಮದ್ರದಲ್ಲಿ ತೈಲ ಸಾಗಣೆ ಮಾಡುತ್ತಿದ್ದ ವ್ಯಾಪಾರಿ ಹಡಗಿನಲ್ಲಿ ಬುಧವಾರ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ. ಈ ಘಟನೆಯಿಂದಾಗಿ ಹಡಗಿನ ಟ್ಯಾಂಕರ್‌ನಿಂದ ಸಮುದ್ರಕ್ಕೆ ತೈಲ ಸೋರಿಕೆಯಾಗಿಲ್ಲ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

30 ಸಾವಿರ ಟನ್‌ ‘ಹೈ ಸ್ಪೀಡ್‌ ಡೀಸೆಲ್‌’ಅನ್ನು ಹಡಗಿನ ಟ್ಯಾಂಕರ್‌ನಲ್ಲಿ ಸಾಗಿಸಲಾಗುತ್ತಿತ್ತು. ಕಾಂಡ್ಲಾದ ಡಿನೆಯಾಲ್‌ ಬಂದರಿನಿಂದ 15 ನಾಟಿಕಲ್ ಮೈಲು ದೂರಲ್ಲಿದ್ದ ಎಂಟಿ ಜೆನೆಸ್ಸಾ ತೈಲ ಸಾಗಣೆ ಟ್ಯಾಂಕರ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿನ ನಂದಿಸುವ ಕಾರ್ಯಾಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಹಡಗಿನಲ್ಲಿದ್ದ ಎಲ್ಲಾ 26 ಮಂದಿಯನ್ನು ಭಾರತಿಯ ಕರಾವಳಿ ಪಡೆ ರಕ್ಷಿಸಿದೆ. ಅದರಲ್ಲಿ ಇಬ್ಬರಿಗೆ ಸುಟ್ಟಗಾಯಗಳಾಗಿವೆ ಎಂದು ವರದಿಯಾಗಿದೆ.

ADVERTISEMENT

‘ಟ್ಯಾಂಕರ್‌ನಿಂದ ಯಾವುದೆ ತೈಲ ಸಮುದ್ರಕ್ಕೆ ಸೋರಿಕೆಯಾಗಿಲ್ಲ’ ಎಂದು ರಕ್ಷಣಾ ಇಲಾಖೆಯ ಗುಜರಾತ್‌ ವಿಭಾಗದ ಅಭಿಷೇಕ್‌ ಮಾಟಿಮಾನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.