ಪಟ್ನಾ: ಬಿಜೆಪಿಗೆ ಮೊದಲು ತ್ರಿವಳಿ ತಲಾಕ್ ನೀಡಿದ ರಾಜ್ಯ ರಾಜಸ್ಥಾನ ಎಂದು ಬಿಹಾರದ ಪಟ್ನಾ ಸಾಹೇಬ್ ಕ್ಷೇತ್ರದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ವ್ಯಂಗ್ಯವಾಡಿದ್ದಾರೆ.
ರಾಜಸ್ಥಾನದ ಒಂದು ವಿಧಾನಸಭಾ ಕ್ಷೇತ್ರ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಂಡಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಸಿನ್ಹಾ, ‘ಆಡಳಿತಾರೂಢ ಪಕ್ಷಕ್ಕೆ ಹಾನಿಕಾರಕ ಫಲಿತಾಂಶದ ಬ್ರೇಕಿಂಗ್ ಸುದ್ದಿ, ರಾಜಸ್ಥಾನದಲ್ಲಿ ಬಿಜೆಪಿಗೆ ಮೊದಲ ತ್ರಿವಳಿ ತಲಾಕ್. ತಲಾಕ್ ಅಜ್ಮೀರ್, ತಲಾಕ್ ಅಲ್ವಾರ್, ತಲಾಕ್ ಮಂಡಲಗಡ. ತಲಾಕ್’ ಎಂದು ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.