ADVERTISEMENT

ಕಮರಿಗೆ ಬಿದ್ದ ಬಸ್‌ ಆರು ಮಂದಿ ಸಾವು

ಪಿಟಿಐ
Published 25 ಜೂನ್ 2019, 20:30 IST
Last Updated 25 ಜೂನ್ 2019, 20:30 IST
ಕಮರಿಗೆ ಬಿದ್ದಿರುವ ಬಸ್‌ –ಪಿಟಿಐ ಚಿತ್ರ
ಕಮರಿಗೆ ಬಿದ್ದಿರುವ ಬಸ್‌ –ಪಿಟಿಐ ಚಿತ್ರ   

ಗರ್ಹ್ವಾ (ಜಾರ್ಖಂಡ್‌) (ಪಿಟಿಐ): ಇಲ್ಲಿನ ಅನುರಾಜ್‌ ಘಾಟಿಯ ಕಮರಿಗೆ ಮಂಗಳವಾರ ಮುಂಜಾನೆ ಬಸ್‌ ಉರುಳಿ ಬಿದ್ದು ಆರು ಮಂದಿ ಮೃತಪಟ್ಟಿದ್ದಾರೆ ಹಾಗೂ 43 ಮಂದಿಗೆ ಗಾಯಗಳಾಗಿವೆ.

‘ಅಂಬಿಕಾಪುರದಿಂದ ಗರ್ಹ್ವಾ ಮೂಲಕಬಸ್ಸು ರಾಂಚಿಗೆ ತೆರಳುತ್ತಿತ್ತು. ಆರು ಮೃತದೇಹಗಳನ್ನು ಸಿಆರ್‌ಪಿಎಫ್‌ ಯೋಧರ ಸಹಾಯದಿಂದ ಹೊರತೆಗೆಯಲಾಗಿದೆ. ಬಸ್ಸಿನ ಕಿಟಕಿಗಳಿಂದ 43 ಮಂದಿ ಗಾಯಾಳುಗಳನ್ನು ರಕ್ಷಿಸಿದ್ದಾರೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಶಿವಾನಿ ತಿವಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT