ADVERTISEMENT

ಮುಖ್ಯಮಂತ್ರಿಗೆ ಘೇರಾವ್ ಆರೋಪ: ಒಂಬತ್ತು ಎಸ್‌ಎಡಿ ಶಾಸಕರ ವಿರುದ್ಧ ಮೊಕದ್ದಮೆ

ಪಿಟಿಐ
Published 16 ಮಾರ್ಚ್ 2021, 10:44 IST
Last Updated 16 ಮಾರ್ಚ್ 2021, 10:44 IST

ಚಂಡೀಗಡ: ಪಂಜಾಬ್‌ನ ಮುಖ್ಯಮಂತ್ರಿ ಅವರ ಎದುರು ಪ್ರತಿಭಟನೆ ನಡೆಸಿ ಘೇರಾವ್‌ಗೆ ಯತ್ನಿಸಿದ ಆರೋಪದಡಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷದ ಒಂಬತ್ತು ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರತಿಭಟನೆಯು ಕಳೆದ ವಾರ ನಡೆದಿತ್ತು. ‌ಶರಂಜಿತ್ ಸಿಂಗ್ ಧಿಲ್ಲೋನ್‌ ಮತ್ತು ಬಿಕ್ರಂ ಸಿಂಗ್ ಮಜಿತೀಯಾ ಸೇರಿದಂತೆ ಒಂಬತ್ತು ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಮತ್ತು ಬಲವಂತವಾಗಿ ತಡೆ ಒಡ್ಡಿದ್ದು ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೇಂದ್ರದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ವಿಧಾನಸಭೆಯಲ್ಲಿ ನಿಲುವಳಿ ಅಂಗೀಕರಿಸಲು ಆಗ್ರಹಿಸಿ ಶಾಸಕರು ಕಳೆದ ವಾರ ವಿಧಾನಸಭೆ ಹೊರಗೆ ಪ್ರತಿಭಟನೆ ನಡೆಸಿದ್ದರು. ಸಚಿವಾಲಯದ ಅಧಿಕಾರಿಗಳು ಈ ಬಗ್ಗೆ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.