ADVERTISEMENT

ಮಹಿಳೆ ಮೇಲೆ ಆಸಿಡ್‌: ಬಾಲಾರೋಪಿಗೆ ಜಾಮೀನು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 15:27 IST
Last Updated 20 ಏಪ್ರಿಲ್ 2022, 15:27 IST

ಶ್ರೀನಗರ: ಮಹಿಳೆಯೊಬ್ಬರ ಮೇಲಿನ ಆಸಿಡ್‌ ದಾಳಿ ಪ್ರಕರಣ ಸಂಬಂಧ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಬಾಲಾರೋಪಿಗೆ ಬುಧವಾರ ಇಲ್ಲಿನ ಬಾಲಾಪರಾಧಿ ನ್ಯಾಯ ಮಂಡಳಿ (ಜೆಜೆಬಿ) ಜಾಮೀನು ನಿರಾಕರಿಸಿದೆ.

ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮಂಡಳಿಯ ಪ್ರಧಾನ ನ್ಯಾಯಾಧೀಶ ತೌಸೀಫ್‌ ಅಹ್ಮದ್‌ ಮ್ಯಾಗ್ರೆ, ಬಾಲಾರೋಪಿಯ ಜಾಮೀನು ತಿರಸ್ಕರಿಸಿ, ಅರ್ಜಿಯನ್ನು ವಜಾಗೊಳಿಸಿದ್ದಾರೆ.

‘ಇಂತಹ ಪ್ರಕರಣಗಳಲ್ಲಿ ಬಾಲಾರೋಪಿಯನ್ನು ಬಿಡುಗಡೆ ಮಾಡಿದರೆ ನ್ಯಾಯಾಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಾಗುತ್ತದೆ. ಅಲ್ಲದೇ ಕಾನೂನು ಸುವ್ಯವಸ್ಥೆ ಧಕ್ಕೆಯಾಗುತ್ತದೆ.ಆರೋಪಿ ಎಸಗಿರುವ ಘೋರ ಕೃತ್ಯದಿಂದ ಸಂತ್ರಸ್ತೆ ಕುಟುಂಬ ಹಾಗೂ ಸಮಾಜದ ಮೇಲೆ ವಿಸ್ತೃತ ನೆಲೆಯ ಮೇಲೆ ಪರಿಣಾಮಗಳನ್ನು ಆಧರಿಸಿ ಬಾಲಾರೋಪಿಗೆ ಜಾಮೀನು ನಿರ್ಧರಿಸಬೇಕಿದೆ’ ಎಂದು ’ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.