ADVERTISEMENT

ಅಮರನಾಥ ಯಾತ್ರೆ: ಏಳು ಯಾತ್ರಾರ್ಥಿಗಳ ಸಾವು

ಸಾವಿನ ಸಂಖ್ಯೆ 49ಕ್ಕೆ ಏರಿಕೆ

ಪಿಟಿಐ
Published 16 ಜುಲೈ 2022, 11:17 IST
Last Updated 16 ಜುಲೈ 2022, 11:17 IST
ಅಮರನಾಥ ಯಾತ್ರೆಯ ದೃಶ್ಯ (ಸಾಂದರ್ಭಿಕ ಚಿತ್ರ)
ಅಮರನಾಥ ಯಾತ್ರೆಯ ದೃಶ್ಯ (ಸಾಂದರ್ಭಿಕ ಚಿತ್ರ)   

ಶ್ರೀನಗರ: ಆರು ಯಾತ್ರಾರ್ಥಿಗಳು ಮತ್ತು ಒಬ್ಬ ಕುದುರೆ ಸವಾರ ಸೇರಿದಂತೆ ಒಟ್ಟು ಏಳು ಮಂದಿ ಅಮರನಾಥ ಯಾತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಯಾತ್ರೆಯಲ್ಲಿ ಸಾವಿಗೀಡಾದವರ ಸಂಖ್ಯೆ 49ಕ್ಕೆ ಏರಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 30ರಂದು ಆರಂಭಗೊಂಡ ಯಾತ್ರೆಯಲ್ಲಿ ಇದುವರೆಗೆ 47 ಯಾತ್ರಾರ್ಥಿಗಳು ಮತ್ತು ಇಬ್ಬರು ಕುದುರೆ ಸವಾರರು ಸಾವಿಗೀಡಾಗಿದ್ದಾರೆ. ಜುಲೈ 8ರಂದು ಪ್ರವಾಹದಲ್ಲಿ 15 ಯಾತ್ರಾರ್ಥಿಗಳು ಸಾವಿಗೀಡಾಗಿ, 55ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಪ್ರಸಿದ್ಧ ಅಮರನಾಥ ಗುಹಾಂತರ ದೇವಾಲಯಕ್ಕೆ ಇದುವರೆಗೆ ಒಟ್ಟು 1.5 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.