ಜಮ್ಮು: ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಭಾರತದ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂಭಾರತೀಯ ಸೇನೆಯುಇಸ್ರೇಲ್ ನಿರ್ಮಿತ ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ನಿಯೋಜಿಸಿದೆ.
ಬಾಲಾಕೋಟ್ನಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ದಾಳಿ ನಡೆಸಿದ ಪಾಕ್ ಸೇನೆಯು ಭಾರತದ ಗಡಿಗೆ ದೊಡ್ಡಮಟ್ಟದಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಟ್ಯಾಂಕ್ ನಿರೋಧಕ ಕ್ಷಿಪಣಿಗಳ ನಿಯೋಜನೆಗೆ ಭಾರತೀಯ ಸೇನೆಯು ಕಳೆದ ಕೆಲ ತಿಂಗಳುಗಳಿಂದ ಯೋಜನೆ ರೂಪಿಸಿತ್ತು.
ಗುರಿಯತ್ತ ಕರಾರುವಾಕ್ದಾಳಿ ನಡೆಸಬಲ್ಲ ಈ ಅತ್ಯಾಧುನಿಕ ಕ್ಷಿಪಣಿಗಳನ್ನು ‘ಸ್ಪೈಕ್’ ಎಂದು ಕರೆಯಲಾಗುತ್ತದೆ. ಸ್ಪೈಕ್ ಕ್ಷಿಪಣಿ ವ್ಯವಸ್ಥೆ ಅಳವಡಿಸಿರುವುದನ್ನು ಸೇನೆಯಸೇನೆಯ ಉತ್ತರ ಕಮಾಂಡ್ ದೃಢಪಡಿಸಿದೆ.
ನಿಖರ ದಾಳಿ ಮತ್ತು ಗುರಿ ಮುಟ್ಟುವ ದಾಖಲೆಗಳಿಗೆ ಹೆಸರುವಾಸಿಯಾಗಿರುವ ಸ್ಪೈಕ್ ಕ್ಷಿಪಣಿಗಳುಸೇನಾ ವಲಯದಲ್ಲಿ‘ಹಾರಿಸಿ ಮರೆತುಬಿಡು’ (ಫೈರ್ ಆಂಡ್ ಫರ್ಗೆಟ್) ಎಂದೇ ಹೆಸರುವಾಸಿ. ಯೋಧರು ಹೊತ್ತೊಯ್ಯಲು ಸಾಧ್ಯವಾಗಿರುವಲಾಂಚರ್ಗಳ(ಉಡಾವಣಾ ಯಂತ್ರಗಳು) ಮೂಲಕನಾಲ್ಕು ಕಿ.ಮೀ. ದೂರದಿಂದಲೇ ಗುರಿಯನ್ನು ನಿರ್ಧರಿಸಿ ಈ ಕ್ಷಿಪಣಿಗಳನ್ನು ಉಡಾಯಿಸಬಹುದು. ಶಕ್ತಿಶಾಲಿ ಟ್ಯಾಂಕ್ಗಳು, ಕಟ್ಟಡಗಳು ಮತ್ತು ಬಂಕರ್ಗಳನ್ನು ಸ್ಫೋಟಿಸುವ ಸಾಮರ್ಥ್ಯ ಈ ಕ್ಷಿಪಣಿಗಳಿಗೆ ಇದೆ.
ಕಳೆದ ಅಕ್ಟೋಬರ್ 16ರ ನಂತರ ಕ್ಷಿಪಣಿಗಳನ್ನು ಗಡಿಯಲ್ಲಿ ನಿಯೋಜಿಸುವ ಕಾರ್ಯ ಆರಂಭಿಸಲಾಯಿತು. ಇದೀಗ ಈ ಕ್ಷಿಪಣಿಗಳು ಬಳಕೆಗೆ ಸಿದ್ಧವಾಗಿವೆ. ಇಸ್ರೇಲ್ನಿಂದ ಸೇನೆಯು ತುರ್ತು ಖರೀದಿ ಯೋಜನೆಯಡಿ ₹280 ಕೋಟಿ ಮೊತ್ತದ12 ಲಾಂಚರ್ಗಳು ಮತ್ತು 210 ಕ್ಷಿಪಣಿಗಳನ್ನು ಖರೀದಿಸಿದೆ.
ಪರ್ವತ ಶಿಖರ ಮತ್ತು ಸಮತಟ್ಟು ಭೂಮಿಯಿಂದಲೂಈ ಕ್ಷಿಪಣಿಗಳನ್ನು ಉಡಾಯಿಸಬಹುದಾಗಿದೆ. ವಾಹನಗಳು, ಹೆಲಿಕಾಪ್ಟರ್ಗಳು, ಹಡಗುಗಳಿಗೂ ಲಾಂಚರ್ಗಳನ್ನು ಅಳವಡಿಸಲು ಅವಕಾಶವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.