ADVERTISEMENT

ಕೆಸಿಆರ್, ಕೇಜ್ರಿವಾಲ್ ಭೇಟಿ: ಪರ್ಯಾಯ ರಾಷ್ಟ್ರ ರಾಜಕಾರಣದ ಕುರಿತು ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2022, 10:16 IST
Last Updated 22 ಮೇ 2022, 10:16 IST
ಅರವಿಂದ ಕೇರ್ಜಿವಾಲ್‌ ಮತ್ತು ಕೆ.ಚಂದ್ರಶೇಖರ್‌ ರಾವ್‌
ಅರವಿಂದ ಕೇರ್ಜಿವಾಲ್‌ ಮತ್ತು ಕೆ.ಚಂದ್ರಶೇಖರ್‌ ರಾವ್‌   

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.

ಉಭಯ ನಾಯಕರ ನಡುವಿನ ಚರ್ಚೆಯು ಸುಮಾರು ಒಂದು ಗಂಟೆ ಕಾಲ ನಡೆದಿದೆ.

ದೇಶದ ಒಕ್ಕೂಟ ವ್ಯವಸ್ಥೆ, ರಾಷ್ಟ್ರ ಬೆಳವಣಿಗೆಯಲ್ಲಿ ರಾಜ್ಯಗಳ ಕೊಡುಗೆ ಹಾಗೂ ರಾಷ್ಟ್ರ ರಾಜಕಾರಣದ ಕುರಿತು ಉಭಯ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ ಎಂದು ಸಿಎಂ (ಕೆಸಿಆರ್‌) ಕಚೇರಿ ತಿಳಿಸಿದೆ.

ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ರಾಜಕೀಯ ಕಾರ್ಯಸೂಚಿಯನ್ನು ರೂಪಿಸುವ ಕುರಿತು ಕೆಸಿಆರ್‌ ಅವರು ಕೇಜ್ರಿವಾಲ್‌ರೊಂದಿಗೆ ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳೂ ಮುನ್ನೆಲೆಗೆ ಬಂದಿವೆ.

ADVERTISEMENT

ಮಾತುಕತೆಯ ಬಳಿಕ ಉಭಯ ನಾಯಕರು ಚಂಡೀಗಢಕ್ಕೆ ತೆರಳಿದ್ದಾರೆ. ಕೃಷಿ ಕಾನೂನುಗಳ ವಿರುದ್ಧ ನಡೆದ ಹೋರಾಟದಲ್ಲಿ ಮೃತಪಟ್ಟ ರೈತರ ನಿವಾಸಗಳಿಗೆ ಅವರು ಭೇಟಿ ನೀಡಿಲಿದ್ದಾರೆ. ಇದೇ ವೇಳೆ, ಸಂತ್ರಸ್ತ ಕುಟುಂಬಗಳಿಗೆ ₹3 ಲಕ್ಷ ಚೆಕ್ ಅನ್ನು ಕೆಸಿಆರ್‌ ವಿತರಿಸಲಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನೂ ಕೆಸಿಆರ್‌ ಶನಿವಾರ ಭೇಟಿ ಮಾಡಿರುವುದು ರಾಷ್ಟ್ರ ರಾಜಕೀಯದಲ್ಲಿ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.