ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರ ಪಾದಗಳನ್ನು ತೊಳೆದಿದ್ದಾರೆ. ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ಹಿರಿಯರಿಗೆ ಗೌರವ ತೋರುವುದು ಭಾರತೀಯ ಸಂಸ್ಕೃತಿಯ ತತ್ವ, ನಮ್ಮ ಪಕ್ಷದ ಮೂಲಾಧಾರವೂ ಆಗಿದೆ’ ಎಂದು ಅವರು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
‘ಆರಂಭಿಕ ದಿನಗಳಲ್ಲಿ ಬಿಜೆಪಿಯನ್ನು ಅಸ್ಸಾಂನಲ್ಲಿ ಬಲಪಡಿಸಲು ಮಹತ್ತರ ಕೊಡುಗೆ ನೀಡಿದ ಬಿಜೆಪಿಯ ಹಿರಿಯ ನಾಯಕರ ಪಾದಗಳನ್ನು ತೊಳೆದು, ಅವರನ್ನು ಗೌರವಿಸಿದ್ದೇನೆ’ ಎಂದು ಶರ್ಮಾ ಹೇಳಿದ್ದಾರೆ.
ಸಿಎಂ ಶರ್ಮಾ, ನೆಲದ ಮೇಲೆ ಕುಳಿತು ನಾಯಕರ ಪಾದಗಳನ್ನು ತೊಳೆದು, ನಂತರ ಬಟ್ಟೆಯಿಂದ ಪಾದಗಳನ್ನು ಒರೆಸಿ, ಆಶೀರ್ವಾದ ಪಡೆಯುತ್ತಿರುವುದು ವಿಡಿಯೊದಲ್ಲಿದೆ.
ಶನಿವಾರ ಗುವಾಹಟಿಯಲ್ಲಿ ಬಿಜೆಪಿಯ ನೂತನ ಕಚೇರಿ ಉದ್ಘಾಟನೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.