ADVERTISEMENT

ಜುಬಿನ್ ಸಾವು ತನಿಖೆಯಲ್ಲಿ ಎಸ್‌ಐಟಿ ವಿಫಲವಾದರೆ ಪ್ರಕರಣ ಸಿಬಿಐಗೆ: ಸಿಎಂ

ಪಿಟಿಐ
Published 25 ಸೆಪ್ಟೆಂಬರ್ 2025, 15:45 IST
Last Updated 25 ಸೆಪ್ಟೆಂಬರ್ 2025, 15:45 IST
ಗಾಯಕ ಜುಬಿನ್ ಗರ್ಗ್ (ಪಿಟಿಐ ಸಂಗ್ರಹ ಚಿತ್ರ)
ಗಾಯಕ ಜುಬಿನ್ ಗರ್ಗ್ (ಪಿಟಿಐ ಸಂಗ್ರಹ ಚಿತ್ರ)   

ಗುವಾಹಟಿ: ಸಿಂಗಾಪುರದಲ್ಲಿ ಮೃತಪಟ್ಟ ಗಾಯ‌ಕ ಜುಬಿನ್ ಗರ್ಗ್ ಅವರ ಸಾವಿನ ಪ್ರಕರಣದಲ್ಲಿ, ಎಸ್‌ಐಟಿಯ ತನಿಖೆ ಯಾವುದೆ ಹಂತದಲ್ಲಿ ಅತೃಪ್ತಿಕರ ಎಂದು ಕಂಡು ಬಂದರೆ, ಸರ್ಕಾರ ತನಿಖೆಯನ್ನು ಸಿಬಿಐಗೆ ಶಿಫಾರಸು ಮಾಡುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ.

ಎಸ್‌ಐಟಿ ತನಿಖೆಯ ಬಗ್ಗೆ ನಂಬಿಕೆ ಇಡುವಂತೆ ಜನರಿಗೆ ಕೇಳಿಕೊಂಡ ಮುಖ್ಯಮಂತ್ರಿ, ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡದಂತೆ, ಇದು ತನಿಖೆಗೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಸಿಂಗಾಪುರದ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾದ ಗಾಯಕ ಗರ್ಗ್ ಅವರ ಸಾವಿನ ತನಿಖೆಗಾಗಿ ಸಿಐಡಿ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾ ಅವರ ನೇತೃತ್ವದಲ್ಲಿ 10 ಸದಸ್ಯರ ಎಸ್‌ಐಟಿ ರಚಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.