ಕೊಲ್ಕತ್ತಾ:ಪಶ್ಚಿಮಬಂಗಾಳದಲ್ಲಿಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು,ತೃಣಮೂಲ ಕಾಂಗ್ರೆಸ್ ಅಥವಾಮಮತಾಬ್ಯಾನರ್ಜಿಗೆ ಈ ಕಾಯ್ದೆಯನ್ನು ತಡೆಯಲುಸಾಧ್ಯವಿಲ್ಲಎಂದು ಪಶ್ಚಿಮಬಂಗಾಳದಬಿಜೆಪಿಅಧ್ಯಕ್ಷದಿಲೀಪ್ ಘೋಷ್ ಹೇಳಿದ್ದಾರೆ.
ಭಾರತದಲ್ಲಿ ಮೊದಲಿಗೆಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿರುವ ಪಶ್ಚಿಮಬಂಗಾಳದಮುಖ್ಯಮಂತ್ರಿಮಮತಬ್ಯಾನರ್ಜಿರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದರು.
ಮಮತಬ್ಯಾನರ್ಜಿ ಅವರು ಮತಬ್ಯಾಂಕ್ಕಳೆದುಕೊಳ್ಳುವಭಯದಲ್ಲಿದ್ದಾರೆಎಂದು ಲೇವಡಿ ಮಾಡಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪಶ್ಚಿಮ ಬಂಗಾಳದಲ್ಲಿಯೇ ಮೊದಲಿಗೆಜಾರಿಗೆತರಲಾಗಿವುದುಎಂದು ಹೇಳಿದ್ದಾರೆ.
ಅಕ್ರಮವಾಗಿನುಸುಳಿರುವವರಬಗ್ಗೆತಲೆಕೆಡಿಸಿಕೊಂಡಿದ್ದಾರೆಆದರೆ ನಿರಾಶ್ರಿತರಾಗಿರುವ ಹಿಂದೂಗಳ ಬಗ್ಗೆ ಅನುಕಂಪ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.