ADVERTISEMENT

ನಕ್ಸಲ್‌ ದಾಳಿ:ಬಿಜೆಪಿ ಎಂಎಲ್‌ಸಿ ಚಿಕ್ಕಪ್ಪನ ಹತ್ಯೆ

ಪಿಟಿಐ
Published 30 ಡಿಸೆಂಬರ್ 2018, 20:09 IST
Last Updated 30 ಡಿಸೆಂಬರ್ 2018, 20:09 IST

ಔರಂಗಬಾದ್‌: ಬಿಹಾರದ ಔರಂಗಬಾದ್‌ ಜಿಲ್ಲೆಯಲ್ಲಿ ನಕ್ಸಲರು ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ, 10 ವಾಹನಗಳಿಗೆ ಬೆಂಕಿಹಚ್ಚಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಮೃತರನ್ನು ನರೇಂದ್ರ ಸಿಂಗ್ (55) ಎಂದು ಗುರುತಿಸಲಾಗಿದೆ. ಇವರುಬಿಹಾರ ವಿಧಾನಪರಿಷತ್‌ ಸದಸ್ಯ ರಾಜನ್‌ಕುಮಾರ್ ಅವರ ಚಿಕ್ಕಪ್ಪ ಎಂದು ಮಾಹಿತಿ ನೀಡಿದ್ದಾರೆ.

ದಿಯೊ ಪೊಲೀಸ್‌ ಠಾಣೆ ವ್ಯಾಪ್ತಿಯ ಸೂಡಿ ಬಿಗಾಹ ಗ್ರಾಮದಲ್ಲಿ ಶನಿವಾರ ರಾತ್ರಿ ದಾಳಿ ನಡೆಸಿದ ನಕ್ಸಲರು ನರೇಂದ್ರ ಸಿಂಗ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್‌ ಅಧೀಕ್ಷಕ ಸತ್ಯ ಪ್ರಕಾಶ್‌ ಹೇಳಿದ್ದಾರೆ.

ADVERTISEMENT

ನರೇಂದ್ರ ಸಿಂಗ್‌ ಅವರ ಮನೆಯ ಬಳಿ ಗಾಳಿಯಲ್ಲಿ 50ಕ್ಕೂ ಹೆಚ್ಚು ಸಲ ಗುಂಡು ಹಾರಿಸಿದ ನಕ್ಸಲರು ನಂತರ 10 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅದರಲ್ಲಿ ನರೇಂದ್ರ ಸಿಂಗ್ ಅವರಿಗೆ ಸೇರಿದ 3 ಟ್ರ್ಯಾಕ್ಟರ್‌ಗಳು ಭಸ್ಮವಾಗಿವೆ.

ದಾಳಿ ಕುರಿತು ಮಾಹಿತಿ ಪಡೆದ ಭದ್ರತಾ ಪಡೆ ಸಿಬ್ಬಂದಿ ಸ್ಥಳಕ್ಕೆತೆರಳುತ್ತಿದ್ದಂತೆ ನಕ್ಸಲರು ಅಲ್ಲಿಂದ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರಿಗೆ ಉದ್ಯಮಿ ನರೇಂದ್ರ ಸಿಂಗ್‌₹ 10 ಲಕ್ಷಕ್ಕೂ ಹೆಚ್ಚು ಸುಂಕ ಪಾವತಿ ಮಾಡಿರದ ಕಾರಣ ನಕ್ಸಲರು ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.