ನಾಗರ್ಕೋಯಿಲ್ (ತಮಿಳುನಾಡು): ಮುಂದಿನ ತಿಂಗಳು ನಡೆಯಲಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ‘ತುಂಬಾ ಸ್ಪಷ್ಟವಾಗಿ ನಿರ್ಧರಿಸಿದ್ದೇನೆ’. ಚುನಾವಣೆ ವೇಳೆ ಇದನ್ನು ಬಹಿರಂಗ ಪಡಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ,ಮಾಧ್ಯಮ ಪ್ರತಿನಿಧಿಗಳು ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ ಎಂಬ ಪ್ರಶ್ನೆಯನ್ನು ಪದೇ ಪದೇ ರಾಹುಲ್ ಗಾಂಧಿಯವರ ಮುಂದಿರಿಸಿದಾಗ ‘ನನ್ನ ನಿರ್ಧಾರ ಸ್ಪಷ್ಟ. ನಾನು ಪಕ್ಷದ ಅಧ್ಯಕ್ಷನಾಗುತ್ತೀನೊ ಅಥವಾ ಇಲ್ಲವೊ ಎನ್ನುವುದು ಪಕ್ಷದ ಚುನಾವಣೆ ವೇಳೆ ಸ್ಪಷ್ಟವಾಗಲಿದೆ. ದಯವಿಟ್ಟು ಆ ದಿನಕ್ಕಾಗಿ ಕಾಯಿರಿ’ ಎಂದು ಪ್ರತಿಕ್ರಿಯಿಸಿದರು.
‘ಆರೆಸ್ಸೆಸ್ ಮತ್ತು ಬಿಜೆಪಿ ದೇಶದಲ್ಲಿ ಮಾಡಿರುವ ಹಾನಿ ಸರಿಪಡಿಸಿ, ಭಾರತ ಜೋಡಿಸುವುದು ಈ ಯಾತ್ರೆಯ ಉದ್ದೇಶ’ ಎಂದು ಕಾಂಗ್ರೆಸ್ ನಾಯಕರಾಹುಲ್ ಗಾಂಧಿ,ಬಿಜೆಪಿಯ ‘ಪರಿವಾರ್ ಬಚಾವೋ’ ಟೀಕೆಗೆ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.