ADVERTISEMENT

ರಾಜ್ಯಸಭೆ ಉಪ ಸಭಾಪತಿ ಹುದ್ದೆ: ಹರಿವಂಶಗೆ ಬಿಜೆಡಿ ಬೆಂಬಲ

ಪಿಟಿಐ
Published 14 ಸೆಪ್ಟೆಂಬರ್ 2020, 7:47 IST
Last Updated 14 ಸೆಪ್ಟೆಂಬರ್ 2020, 7:47 IST
ನವೀನ್‌ ಪಟ್ನಾಯಕ್‌
ನವೀನ್‌ ಪಟ್ನಾಯಕ್‌   

ಭುವನೇಶ್ವರ: ‘ರಾಜ್ಯಸಭೆ ಉಪ ಸಭಾಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹರಿವಂಶ ನಾರಾಯಣ ಸಿಂಗ್‌ ಅವರನ್ನು ನಾವು ಬೆಂಬಲಿಸುತ್ತೇವೆ’ ಎಂದು ಬಿಜು ಜನತಾ ದಳದ (ಬಿಜೆಡಿ) ಅಧ್ಯಕ್ಷ ಹಾಗೂ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸೋಮವಾರ ತಿಳಿಸಿದ್ದಾರೆ.

‘ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್‌ ಕುಮಾರ್‌ ಅವರು ಸೋಮವಾರ ಬೆಳಿಗ್ಗೆ ಕರೆ ಮಾಡಿ ಪಟ್ನಾಯಕ್‌ ಅವರೊಂದಿಗೆ ಮಾತನಾಡಿದ್ದಾರೆ. ಹೀಗಾಗಿ ಅವರು ಹರಿವಂಶ ಅವರಿಗೆ ಬೆಂಬಲ ಸೂಚಿಸಲು ತೀರ್ಮಾನಿಸಿದ್ದಾರೆ’ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಜೆಡಿಯು ಸಂಸದರಾಗಿರುವ ಹರಿವಂಶ ಅವರು ಬುಧವಾರ ಉಪ ಸಭಾಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.

ADVERTISEMENT

ಒಡಿಶಾದ 10 ರಾಜ್ಯಸಭಾ ಸದಸ್ಯರ ಪೈಕಿ ಒಂಬತ್ತು ಮಂದಿ ಬಿಜೆಡಿಯವರೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.