ADVERTISEMENT

ಜೈಪುರ: ಸಚಿವರ ‘ಜಾತಿ’ ಹೇಳಿಕೆಗೆ ಬಿಜೆಪಿ ಆಕ್ಷೇಪ

ಪಿಟಿಐ
Published 2 ಜನವರಿ 2019, 14:00 IST
Last Updated 2 ಜನವರಿ 2019, 14:00 IST
ಮಮತಾ ಭೂಪೇಶ್
ಮಮತಾ ಭೂಪೇಶ್   

ಜೈಪುರ: ಮೊದಲು ತಮ್ಮ ಜಾತಿಗಾಗಿ ಕೆಲಸ ಮಾಡಿ, ಬಳಿಕ ಉಳಿದ ಸಮುದಾಯಗಳತ್ತ ಗಮನ ಹರಿಸುತ್ತೇನೆ ಎಂದಿದ್ದ ರಾಜಸ್ಥಾನ ಸಚಿವೆ ಮಮತಾ ಭೂಪೇಶ್ ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ.

‘ಇಂದು ಕಾಂಗ್ರೆಸ್ ಪಕ್ಷದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮದನ್‌ಲಾಲ್ ಸೈನಿ ಟೀಕಿಸಿದ್ದಾರೆ. ‘ಕಾಂಗ್ರೆಸ್ ಪಕ್ಷದ ಆಲೋಚನೆಗೆ ಇದು ಉದಾಹರಣೆ. ಸರ್ಕಾರದಲ್ಲಿ ಜಾತಿಯ ಆಧಾರದಲ್ಲಿ ಕೆಲಸಗಳನ್ನು ಮಾಡಲು ಆಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ತಮ್ಮ ಸಮುದಾಯಕ್ಕೆ ನೆರವು ನೀಡಬೇಕೆಂದಿದ್ದರೆ, ಇಲಾಖೆಯಲ್ಲಿ ಹಲವು ಯೋಜನೆಗಳಿವೆ ಎಂದು ಅವರು ಸಚಿವರಿಗೆ ನೆನಪಿಸಿದ್ದಾರೆ.

ADVERTISEMENT

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಮಮತಾ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರದ ಏಕೈಕ ಮಹಿಳಾ ಸಚಿವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.