ADVERTISEMENT

ಕೇರಳದಲ್ಲಿ ಬಿಜೆಪಿಗೆ ಭವಿಷ್ಯ: ಅಮಿತ್‌ ಶಾ ಹಗಲುಗನಸು: ಸಿಪಿಎಂ ನಾಯಕ ಬೇಬಿ

ಪಿಟಿಐ
Published 4 ಸೆಪ್ಟೆಂಬರ್ 2022, 13:54 IST
Last Updated 4 ಸೆಪ್ಟೆಂಬರ್ 2022, 13:54 IST
ಎಂ.ಎ. ಬೇಬಿ
ಎಂ.ಎ. ಬೇಬಿ   

ತಿರುವನಂತಪುರ: ಕೇರಳದಲ್ಲಿ ಬಿಜೆಪಿಗೆ ಭವಿಷ್ಯ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಗಲುಕನಸು ಕಾಣುತ್ತಿದ್ದಾರೆ’ ಎಂದುಸಿಪಿಎಂ ನಾಯಕ ಎಂ.ಎ ಬೇಬಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಬಿಜೆಪಿಯು ಇಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಸಮ್ಮೇಳನದಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್‌ ಶಾ ಅವರು, ‘ಕಮ್ಯುನಿಸ್ಟ್‌ ಪಕ್ಷವು ಜಗತ್ತಿನಿಂದಲೇ ಕಾಣೆಯಾಗಲಿದೆ. ಬಿಜೆಪಿಗೆ ಮಾತ್ರ ದೇಶದಲ್ಲಿ ಭವಿಷ್ಯ ಇದೆ’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘2016ರಲ್ಲಿ ಕಾಂಗ್ರೆಸ್‌ ಮತಗಳನ್ನು ಪಡೆದು ನೇಮಮ್‌ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿತ್ತು. ನಂತರ 2021ರಲ್ಲಿ ಈ ಕ್ಷೇತ್ರವನ್ನು ಸಿಪಿಎಂ ಗೆದ್ದುಕೊಂಡಿದೆ. ಕೇರಳದಲ್ಲಿ ಕಮಲ ಅರಳಿಸುವ ಬಗ್ಗೆ ಅಮಿತ್‌ ಶಾ ಮಾತನಾಡುತ್ತಾರೆ. ಆದರೆ, ಕೇರಳದಲ್ಲಿ ಅರಳಿದ್ದ ಒಂದೇ ಒಂದು ಕಮಲದ ಹೂವು ಈಗ ಕೊಳೆತು ಹೋಗಿದೆ’ ಎಂದರು.

ADVERTISEMENT

‘ವಿರೋಧಿ ಪಕ್ಷಗಳಿಂದ ಅದರಲ್ಲೂ ಕಾಂಗ್ರೆಸ್‌ನಿಂದ ಶಾಸಕರನ್ನು, ಸಂಸದರನ್ನು ಬಿಜೆಪಿ ಖರೀದಿಸಿದೆ. ಇದು ಬಿಜೆಪಿಯ ಭ್ರಷ್ಟ ರಾಜಕಾರಣ. ಜೊತೆಗೆ ಕಾಂಗ್ರೆಸ್‌ ಶಾಸಕರೂ ತಮ್ಮನ್ನು ಬಿಜೆಪಿ ಖರೀದಿಸಲಿ ಎಂದು ಬಯಸುತ್ತಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.