ನವದೆಹಲಿ: ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ (ಯುಪಿಸಿಸಿ) ಅಧ್ಯಕ್ಷರಾಗಿ ಬ್ರುಜ್ಲಾಲ್ ಖಾಬ್ರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ವಿವಿಧ ಹುದ್ದೆಗಳಿಗೆ ಆರು ಮುಖಂಡರನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇಮಕ ಮಾಡಿದ್ದಾರೆ. ನಸೀಮುದ್ದೀನ್ ಸಿದ್ದಿಖಿ, ಅಜಯ್ ರಾಯ್, ವೀರೇಂದ್ರ ಚೌಧರಿ, ನಕುಲ್ ದುಬೆ, ಅನಿಲ್ ಯಾದವ್ ಮತ್ತು ಯೋಗೇಶ್ ದೀಕ್ಷಿತ್ ಅವರು ಯುಪಿಸಿಸಿಗೆ ಹೊಸದಾಗಿ ನೇಮಕರಾಗಿರುವ ಮುಖಂಡರು.
ಅಜಯ್ ಲಲ್ಲು ಅವರು ಯುಪಿಸಿಸಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನಕ್ಕೆ ಖಾಬ್ರಿ ಅವರನ್ನು ಆರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.