ADVERTISEMENT

ದೆಹಲಿಯಲ್ಲಿ ಹೆಚ್ಚುತ್ತಿರುವ ಸರ ಕಳ್ಳರು, ಗೃಹಿಣಿಯರು ಕಂಗಾಲು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 10:29 IST
Last Updated 7 ಸೆಪ್ಟೆಂಬರ್ 2019, 10:29 IST
   

ದೆಹಲಿ: ಮಗುವಿನೊಂದಿಗೆ ನಡೆದು ಹೋಗುತ್ತಿದ್ದ ಗೃಹಿಣಿಯಸರ ಅಪಹರಿಸಿರುವ ಘಟನೆ ದೆಹಲಿಯಲ್ಲಿ ಶುಕ್ರವಾರ ನಡೆದಿದೆ. ಪದೇ ಪದೇ ನಡೆಯುತ್ತಿರುವ ಸರ ಅಪಹರಣ ಪ್ರಕರಣಗಳಿಂದಾಗಿ ದೆಹಲಿಯಲ್ಲಿ ಗೃಹಿಣಿಯರು ಮನೆಯಿಂದ ಹೊರಗೆ ಕಾಲಿಡಲು ಭಯಪಡುವಂತಾಗಿದೆ.

ಮಹಿಳೆ ನಡೆದು ಹೋಗುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಸವಾರರು ಮಹಿಳೆಯ ಬಳಿ ಸರ ಇರುವುದನ್ನು ಗಮನಿಸಿದ್ದಾರೆ. ನಂತರ ಸ್ವಲ್ಪ ದೂರ ಹೋಗಿ ಮತ್ತೆ ವಾಪಸಾಗಿಸರ ಅಪಹರಿಸಿಪರಾರಿಯಾಗಿದ್ದಾರೆ.ಮಹಿಳೆಯು ಮಗುವನ್ನು ಬಿಟ್ಟುಸವಾರನನ್ನು ಹಿಡಿಯಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇತ್ತೀಚೆಗಷ್ಟೇ ಮಗಳ ಜೊತೆ ಹೋಗುತ್ತಿದ್ದ ಮಹಿಳೆಯ ಬಳಿ ಸರ ಅಪಹರಣ ಮಾಡಿದ ವ್ಯಕ್ತಿಯನ್ನು ದೆಹಲಿಯ ನಂಗ್ಲೊಯ್ ಪ್ರದೇಶದಸಾರ್ವಜನಿಕರುಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಗಸ್ಟ್ 30ರಂದು ಈ ಘಟನೆ ನಡೆದಿತ್ತು. ಸೆಪ್ಟೆಂಬರ್ 6ರಂದುಮತ್ತೊಂದು ಸರ ಅಪಹರಣ ಪ್ರಕರಣ ನಡೆದಿದೆ.

ADVERTISEMENT

ಇದರಿಂದಾಗಿ ಮಹಿಳೆಯರು ಕಂಗಾಲಾಗಿದ್ದು, ಆಭರಣ ಧರಿಸಲುಭಯಪಡುವಂತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಚಾವ್ಲಾ ಪ್ರದೇಶದ ಪೊಲೀಸರುಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.