ADVERTISEMENT

ಛತ್ತೀಸಗಢದಲ್ಲಿ ನಕ್ಸಲ್ ಪಿಡುಗು: 17 ಜವಾನರು ಹುತಾತ್ಮ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 12:38 IST
Last Updated 22 ಮಾರ್ಚ್ 2020, 12:38 IST
   

ರಾಯ್‌ಪುರ: ಛತ್ತೀಸಗಢದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ 17 ಜವಾನರು ಶನಿವಾರ ಮೃತಪಟ್ಟಿದ್ದಾರೆ.

ನಕ್ಸಲರ ಗುಂಡಿಗೆ ಬಲಿಯಾದ ಜವಾನರ ಮೃತದೇಹಗಳನ್ನು ರವಿವಾರ ಪತ್ತೆ ಮಾಡಲಾಗಿದೆ ಎಂದು ಛತ್ತಿಸ್‌ಗಢ ಪೊಲೀಸರು ತಿಳಿಸಿದ್ದಾರೆ.

‘ರಾಜ್ಯ ಪೊಲೀಸರು ಜವಾನರ ಮೃತದೇಹಗಳನ್ನು ಕಾಡಿನಿಂದ ತಂದಿದ್ದಾರೆ. ಚಿಂತಗುಫಾ ಪ್ರದೇಶದ ಬೆಟ್ಟಗಳ ಬಳಿ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಎನ್‌ಕೌಂಟರ್ ಪ್ರಾರಂಭವಾಯಿತು. ಘಟನೆಯಲ್ಲಿ 17 ಜವಾನರು ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ’ ಎಂದು ಛತ್ತಿಸಗಢ ಪೊಲೀಸ್ ಮಹಾನಿರ್ದೇಶಕ ಡಿ. ಎಂ. ಅವಸ್ಥಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.