ADVERTISEMENT

ಛತ್ತೀಸ್‌ಗಡ: ನಕ್ಸಲ್‌ ದಾಳಿಗೆ ಐಟಿಬಿಪಿ ಅಧಿಕಾರಿ ಸಾವು

ಪಿಟಿಐ
Published 14 ಮಾರ್ಚ್ 2022, 11:33 IST
Last Updated 14 ಮಾರ್ಚ್ 2022, 11:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಪುರ: ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರುಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದ್ದರಿಂದ ಇಂಡೋ–ಟಿಬೆಟ್‌ ಭದ್ರತಾ ಪೊಲೀಸ್‌ (ಐಟಿಬಿಪಿ) ಪಡೆಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಇನ್ನೊಬ್ಬ ಯೋಧ ಗಾಯಗೊಂಡಿದ್ದಾರೆ.

ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ರಾಜೇಂದ್ರ ಸಿಂಗ್‌ ಮೃತಪಟ್ಟ ಅಧಿಕಾರಿ, ಕಾನ್‌ಸ್ಟೆಬಲ್‌ ಮಹೇಶ್‌ ಗಾಯಗೊಂಡವರು. ಐಟಿಬಿಪಿಯ 53ನೇ ಬೆಟಾಲಿಯನ್‌ ರಸ್ತೆ ಕಾಮಗಾರಿ ನಡೆಸುವವರಿಗೆ ಭದ್ರತೆ ನೀಡಲು ಗಸ್ತುತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಐಜಿಪಿ ಪಿ.ಸುಂದರ್‌ರಾಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT