ಸುಕ್ಮಾ: ಪೊಲೀಸ್ ಮಾಹಿತಿದಾರನೆಂದು ಆರೋಪಿಸಿ ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರನ್ನು ನಕ್ಸಲರು ಹೊಡೆದು ಸಾಯಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕಾಮಪುರ ಗ್ರಾಮದ ಸುಧಾಮ ಹುಂಗ ಮೃತ ವ್ಯಕ್ತಿ. ಜಗರ್ಗುಂಡ ಗ್ರಾಮದ ಹೊರವಲಯದಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಬಳಿ ಕರಪತ್ರವೊಂದು ದೊರಕಿದ್ದು,ಪೊಲೀಸ್ ಮಾಹಿತಿದಾರರೆಂಬ ಕಾರಣಕ್ಕೆ ಇವರನ್ನು ಹತ್ಯೆ ಮಾಡಿರುವುದಾಗಿ ನಕ್ಸಲರು ಅದರಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
’ಸುಧಾಮ ಅವರನ್ನು ಕೆಲ ದಿನಗಳ ಹಿಂದೆ ನಕ್ಸಲರು ಅಪಹರಿಸಿದ್ದರು.ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದೇವೆ‘ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.