ADVERTISEMENT

ಛತ್ತೀಸ್‌ಗಡ: ಅಪಹೃತ ಎಸ್‌ಐ ನಕ್ಸಲರಿಂದ ಹತ್ಯೆ

ಪಿಟಿಐ
Published 24 ಏಪ್ರಿಲ್ 2021, 6:01 IST
Last Updated 24 ಏಪ್ರಿಲ್ 2021, 6:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಯ್‌ಪುರ: ಬಿಜಾಪುರ ಜಿಲ್ಲೆಯ ಪಾಲ್ನಾರ್‌ನಿಂದ ಮೂರು ದಿನಗಳ ಹಿಂದೆ ನಕ್ಸಲರು ಅಪಹರಿಸಿದ್ದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರನ್ನು ಹತ್ಯೆ ಮಾಡಲಾಗಿದೆ.

ಏಪ್ರಿಲ್‌ 21ರಂದು ಪಾಲ್ನಾರ್‌ನಲ್ಲಿರುವ ತಮ್ಮ ಮನೆಗೆ ಬಂದಿದ್ದ ಎಸ್‌ಐ ಮುರಳಿ ತಾಟಿ ಅವರನ್ನು ನಕ್ಸಲರು ಅಪಹರಿಸಿದ್ದರು ಎಂದು ಬಿಜಾಪುರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಮಲೋಚನ್‌ ಕಶ್ಯಪ್‌ ತಿಳಿಸಿದ್ದಾರೆ.

ಮುರಳಿ ಅವರನ್ನು ಕೊಂದ ನಕ್ಸಲರು ದೇಹವನ್ನು ಗಂಗಲೂರು ಹಳ್ಳಿಯ ಸಮೀಪ ಎಸೆದಿದ್ದಾರೆ. ಮೃತ ದೇಹದ ಜತೆಗೆ ‘ಜನತಾ ನ್ಯಾಯಾಲಯದಲ್ಲಿ ತೀರ್ಮಾನಿಸಿದಂತೆ ಪೊಲೀಸ್ ಅಧಿಕಾರಿಗೆ ಶಿಕ್ಷೆ ವಿಧಿಸಲಾಗಿದೆ‘ ಎಂಬ ಸಂದೇಶವನ್ನು ಬಿಟ್ಟು ಹೋಗಿದ್ದಾರೆ.

ADVERTISEMENT

ಈ ತಿಂಗಳ ಆರಂಭದಲ್ಲಿರಾಜ್ಯದ ಸುಕ್ಮಾ – ಬಿಜಾಪುರ ಪ್ರದೇಶದಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿ ಹತರಾಗಿದ್ದರು ಹಾಗೂ 30ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.