ನಾಗ್ಪುರ: ಸರಕು ಸಾಗಣೆ ರೈಲೊಂದರ 20 ಬೋಗಿಗಳು ಹಳಿತಪ್ಪಿದ ಪ್ರಕರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ 11:30ಕ್ಕೆ ನಡೆದಿದೆ. ಇದರಿಂದಾಗಿ ರೈಲು ಮಾರ್ಗಕ್ಕೆ ಅಡಚಣೆ ಆದ ಕಾರಣ ಹಲವಾರು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಯಿತು, ಕೆಲ ರೈಲುಗಳ ಮಾರ್ಗ ಬದಲಿಸಿ ಸಂಚಾರಕ್ಕೆ ಅನುವು ಮಾಡಲಾಯಿತು, ಇನ್ನೂ ಕೆಲವು ರೈಲುಗಳ ಸಂಚಾರವನ್ನು ಕೆಲ ಕಾಲ ತಡೆಹಿಡಿಯಲಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.
ನಾಗ್ಪುರ ವಿಭಾಗದ ಮಾಲ್ಖೇಡ್ ಮತ್ತು ತಿಮಾತ್ಲ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ. ಯಾವುದೇ ಸಾವಿನ ವರದಿಯಾಗಿಲ್ಲ ಎಂದು ಕೇಂದ್ರೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.