ADVERTISEMENT

ಪ್ರತಿಭಟನೆ ಬಿಟ್ಟು ಮಾತುಕತೆಗೆ ಬನ್ನಿ: ರೈತರಿಗೆ ರಾಜನಾಥ್‌ ಸಿಂಗ್‌ ಮನವಿ

ಪಿಟಿಐ
Published 25 ಡಿಸೆಂಬರ್ 2020, 8:35 IST
Last Updated 25 ಡಿಸೆಂಬರ್ 2020, 8:35 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ನವದೆಹಲಿ: ‘ನೂತನ ಕೃಷಿ ಕಾಯ್ದೆಗಳ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧ. ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ರೈತರಿಗೆ ಶುಕ್ರವಾರ ಮನವಿ ಮಾಡಿದರು.

‘ಕಾಯ್ದೆಗೆ ತರುವ ತಿದ್ದುಪಡಿಗಳು ರೈತರ ಹಿತಾಸಕ್ತಿಯನ್ನು ಕಾಪಾಡಬಲ್ಲವು ಎಂಬುದು ಮನವರಿಕೆಯಾದರೆ, ಆ ಕಾರ್ಯಕ್ಕೂ ಸರ್ಕಾರ ಸಿದ್ಧವಿದೆ’ ಎಂದೂ ಅವರು ಭರವಸೆ ನೀಡಿದರು.

ಇಲ್ಲಿನ ದ್ವಾರಕಾದಲ್ಲಿ ಹಮ್ಮಿಕೊಂಡಿರುವ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಸ್ವತಃ ನಾನು ಒಬ್ಬ ರೈತನ ಮಗ. ರೈತರ ಕಷ್ಟಗಳ ಅರಿವಿದೆ. ಅಲ್ಲದೇ, ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯಾವ ಕ್ರಮವನ್ನೂ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಳ್ಳುವುದಿಲ್ಲ’ ಎಂದರು.

ADVERTISEMENT

‘ಒಂದು–ಎರಡು ವರ್ಷಗಳ ಅವಧಿಗಾಗಿ ನೂತನ ಕಾಯ್ದೆಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು. ಈ ಕಾಯ್ದೆಗಳ ಪ್ರಕಾರವೇ ಕೃಷಿ ಉತ್ಪನ್ನಗಳ ಮಾರಾಟ ಮಾಡಿ. ನಿಮಗೆ ಲಾಭವಾಗುವುದಿಲ್ಲ ಎಂದಾದರೆ, ಈ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರಲು ಸರ್ಕಾರ ಸಿದ್ಧ’ ಎಂದೂ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.