ADVERTISEMENT

ಹಿಂದೂ ದೇವತೆಗಳ ಬಗ್ಗೆ ಅವಹೇಳನ: ಐವರ ಬಂಧನ

ಪಿಟಿಐ
Published 2 ಜನವರಿ 2021, 11:55 IST
Last Updated 2 ಜನವರಿ 2021, 11:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದೋರ್‌: ಹಿಂದೂ ದೇವತೆಗಳು ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರ ಬಗ್ಗೆ ಅವಹೇಳನಕಾರಿ ಟೀಕೆ ಮಾಡಿದ ಆರೋಪದಡಿ ಗುಜರಾತ್‌ ಮೂಲದ ಹಾಸ್ಯ ಕಲಾವಿದ ಮುನಾವರ್‌ ಫರೂಖಿ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಶನಿವಾರ ಹೇಳಿದರು.

‘ಶುಕ್ರವಾರ ಇಂದೋರ್‌ನ 56 ದುಕಾನ್‌ ಪ್ರದೇಶದಲ್ಲಿ ಇರುವ ಕೆಫೆಯೊಂದರಲ್ಲಿ ಹಾಸ್ಯ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಬಿಜೆಪಿ ಶಾಸಕಿಯಾದ ಮಾಲಿನಿ ಲಕ್ಷ್ಮಣ್‌ ಸಿಂಗ್‌ ಗೌರ್‌ ಅವರ ಪುತ್ರ ಏಕಲವ್ಯ ಸಿಂಗ್‌ ಗೌರ್‌ ಹಾಗೂ ಅವರ ಸ್ನೇಹಿತರು ಪ್ರೇಕ್ಷಕರಾಗಿ ತೆರಳಿದ್ದರು. ದೇವೆತೆಗಳು ಹಾಗೂ ಅಮಿತ್‌ ಶಾ ಅವರ ಬಗ್ಗೆ ಮುನಾವರ್‌ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಸಂದರ್ಭದಲ್ಲಿ ಅದನ್ನು ಗೌರ್‌ ಖಂಡಿಸಿದ್ದರು. ಜೊತೆಗೆ ಕಾರ್ಯಕ್ರಮವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದರು.’

‘ಮುನಾವರ್‌ ಹಾಗೂ ಇಂದೋರ್‌ ಮೂಲದ ನಾಲ್ಕು ಜನರ ವಿರುದ್ಧ ಶುಕ್ರವಾರ ರಾತ್ರಿಯೇ ಗೌರ್‌ ಲಿಖಿತ ದೂರು ಸಲ್ಲಿಸಿದ್ದರು. ಜೊತೆಗೆ ಕಾರ್ಯಕ್ರಮದ ವಿಡಿಯೊವೊಂದನ್ನೂ ಗೌರ್‌ ಸಲ್ಲಿಸಿದ್ದರು. ಇದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಐವರನ್ನೂ ನಂತರ ಬಂಧಿಸಲಾಯಿತು’ ಎಂದು ತುಕೊಗಂಜ್‌ ಪೊಲೀಸ್‌ ಠಾಣೆಯ ಕಮಲೇಶ್‌ ಶರ್ಮಾ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.