ADVERTISEMENT

ಮಸ್ಸೂರಿ ಕುರಿತು ಸೂಕ್ತ ಅಧ್ಯಯನ ಕೈಗೊಳ್ಳಿ: ಎನ್‌ಜಿಟಿ

ಪಿಟಿಐ
Published 3 ಫೆಬ್ರುವರಿ 2023, 2:13 IST
Last Updated 3 ಫೆಬ್ರುವರಿ 2023, 2:13 IST
   

ನವದೆಹಲಿ: ‘ಮಸ್ಸೂರಿ ಗಿರಿಧಾಮದ ಕುರಿತು ನಿರ್ದಿಷ್ಟ ಅಧ್ಯಯನ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ನಿರ್ದೇಶಿಸಿದೆ.

ಪರಿಸರಕ್ಕೆ ಉಂಟಾಗಬಹುದಾದ ಹಾನಿಯನ್ನು ತಡೆಯಲು ಅಗತ್ಯ ಪರಿಹಾರ ಕ್ರಮಗಳನ್ನು ಸೂಚಿಸುವುದಕ್ಕಾಗಿ ಒಂಬತ್ತು ಸದಸ್ಯರನ್ನೊಳಗೊಂಡ ಸಮಿತಿಯನ್ನೂ ಗುರುವಾರ ರಚಿಸಿದೆ.

ಜೋಶಿಮಠದಲ್ಲಿ ಉದ್ಭವಿಸಿರುವ ವಿಪತ್ತು, ಮಸ್ಸೂರಿ ಪಾಲಿಗೆ ಎಚ್ಚರಿಕೆಯ ಗಂಟೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರ ಆಧಾರದಲ್ಲಿ ಮಂಡಳಿಯು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.