ADVERTISEMENT

ಅತ್ಯಾಚಾರಕ್ಕೆ ‘ಸೌಂದರ್ಯ’ ಹೋಲಿಕೆ ಮಾಡಿದ ‘ಕೈ’ MLA ವಜಾಗೊಳಿಸಲು ಬಿಜೆಪಿ ಆಗ್ರಹ

ಪಿಟಿಐ
Published 17 ಜನವರಿ 2026, 14:54 IST
Last Updated 17 ಜನವರಿ 2026, 14:54 IST
ಪೂಲ್‌ ಸಿಂಹ ಬರೈಯಾ
ಪೂಲ್‌ ಸಿಂಹ ಬರೈಯಾ   

ಭೋಪಾಲ್‌: ‘ಅತ್ಯಾಚಾರ ನಡೆಯಲು ಮಹಿಳೆಯರ ಸೌಂದರ್ಯವೇ ಕಾರಣ’ ಎಂದು ಮಧ್ಯಪ್ರದೇಶದ ಭಂದೇರ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಫೂಲ್‌ ಸಿಂಹ ಬರೈಯಾ ಹೇಳಿಕೆ ನೀಡಿದ್ದು, ಭಾರಿ ವಿವಾದ ಸೃಷ್ಟಿಸಿದೆ.

‘ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಸಮುದಾಯಗಳ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದರೆ, ತೀರ್ಥಯಾತ್ರೆ ಮಾಡಿದ ಫಲ ಸಿಗುತ್ತದೆ ಎಂದು ಧರ್ಮ ಗ್ರಂಥದಲ್ಲಿ ಉಲ್ಲೇಖಿಸಿರುವುದಿಂದ ಆ ರೀತಿ ಅತ್ಯಾಚಾರವೆಸಗಲಾಗುತ್ತಿದೆ’ ಎಂದು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇಂದೋರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಫೂಲ್‌ ಸಿಂಹ ಅವರು ನೀಡಿದ ಹೇಳಿಕೆಯು ಮುನ್ನೆಲೆಗೆ ಬಂದಿದೆ. ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ADVERTISEMENT

ಮುಖ್ಯಮಂತ್ರಿ ಖಂಡನೆ:

‘ರಾಹುಲ್‌ ಗಾಂಧಿ ಅವರು ಇಂದೋರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಕಾಂಗ್ರೆಸ್‌ ಶಾಸಕರೊಬ್ಬರು ಸಮಾಜದಲ್ಲಿ ದ್ವೇಷ ಹರಡುತ್ತಿದ್ದಾರೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ತಿಳಿಸಿದ್ದಾರೆ.

‘ಶಾಸಕ ಫೂಲ್‌ ಸಿಂಹ ಅವರನ್ನು ಪಕ್ಷದಿಂದ ಹೊರಹಾಕುತ್ತಾರೆ ಎಂದು ಭಾವಿಸುತ್ತೇನೆ. ಆಗ ಮಾತ್ರ ಸಮಾಜದಲ್ಲಿರುವ ಎಲ್ಲ ಸಮುದಾಯಗಳ ಬಗ್ಗೆ ಅವರಿಗೆ ಗೌರವವಿದೆ ಎಂದು ನಂಬುತ್ತೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.