ನವದೆಹಲಿ:ತಮಿಳುನಾಡಿನಲ್ಲಿ ಕೋವಿಡ್-19 ಸೋಂಕಿನಿಂದ 54ರ ಹರೆಯದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಇದೀಗ ಭಾರತದಲ್ಲಿ ಸೋಂಕು ತಗುಲಿ ಸಾವಿಗೀಡಾದವರ ಸಂಖ್ಯೆ 11ಕ್ಕೇರಿದೆ. ಸೋಂಕು ಪ್ರಕರಣಗಳ ಸಂಖ್ಯೆ 545 ಆಗಿದೆ.
ತಮಿಳುನಾಡಿನ ಮದುರೈನಲ್ಲಿ ಸಾವಿಗೀಡಾದ ವ್ಯಕ್ತಿ ಹಲವು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಅಧಿಕ ರಕ್ತದೊತ್ತಡ ಮತ್ತು ಕಾಯಿಲೆ ಇತ್ತು ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. ಇವರು ಹೊರದೇಶಕ್ಕೆ ಹೋಗಿ ಬಂದವರಾಗಿರಲಿಲ್ಲ.
ತೆಲಂಗಾಣದಲ್ಲಿ ಮತ್ತೆರಡು ಪ್ರಕರಣ
ತೆಲಂಗಾಣ ಡಿಎಸ್ಪಿಯ ಪುತ್ರನಿಗೆ ಕೊರೊನಾ ಸೋಂಕು ಇದೆ ಎಂದು ದೃಢಪಟ್ಟಿದೆ. ಬ್ರಿಟನ್ನಿಂದ ಮರಳಿದ ಇವರು ಮತ್ತು ಇವರೊಂದಿಗೆ ಬಂದ ಮನೆಕೆಲಸದಾಕೆಗೂ ಸೋಂಕು ಇದೆ. ಅದೇ ವೇಳೆ ಕ್ವಾರೆಂಟೈನ್ ನಿಯಮ ಉಲ್ಲಂಘಿಸಿದ ಡಿಎಸ್ಪಿ ಮತ್ತು ಅವರ ಪುತ್ರನ ವಿರುದ್ಧ ತೆಲಂಗಾಣ ಪೊಲೀಸರು ದೂರು ದಾಖಲಿಸಿದ್ದಾರೆ. ತೆಲಂಗಾಣದಲ್ಲಿ ಇಲ್ಲಿಯವರೆಗೆ 39 ಪ್ರಕರಣಗಳು ವರದಿಯಾಗಿದ್ದು, ಒಬ್ಬ ವ್ಯಕ್ತಿ ಗುಣಮುಖರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.