ಜೈಪುರ: ದನ ಕಳ್ಳಸಾಗಾಣಿಕೆದಾರ ಎಂಬ ಶಂಕೆಯ ಮೇಲೆ ವ್ಯಕ್ತಿಯನ್ನು ಗಂಪೊಂದು ಥಳಿಸಿರುವ ಘಟನೆ ರಾಜಸ್ಥಾನದ ಆಲ್ವಾರ್ ಜಿಲ್ಲೆಯ ಶಹಜಹ್ಪುರದಲ್ಲಿ ನಡೆದಿದೆ.
ಎರಡು ಜೀಪ್ಗಳಲ್ಲಿ ದನಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಭಾನುವಾರ ರಾತ್ರಿ ರಸ್ತೆಗಡ್ಡಲಾಗಿ ಬ್ಯಾರಿಕೇಡ್ಗಳನ್ನು ಹಾಕಿದ್ದರು.
ಈ ವೇಳೆ 6–7 ಹಸುವಿನ ಕರುಗಳಿದ್ದ ಜೀಪನ್ನು ಫುಸಾ ಕಿ ಧಾನಿ ಬಳಿ ತಡೆದ ಗಂಪು, ಮುನ್ಫೆದ್ ಖಾನ್ ಎಂಬಾತನ ಹೊರಗೆಳೆದು ಥಳಿಸಿತು. ‘ಖಾನ್ ವಿರುದ್ಧ ಗೋವು ಕಳ್ಳಸಾಗಣೆ ಕುರಿತ ದೂರುಗಳಿವೆ. ಜೀಪಿನಲ್ಲಿದ್ದ 6–7 ಕರುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಪರಸ್ಪರರ ವಿರುದ್ಧ ದೂರು ದಾಖಲಾಗಿದೆ. ತನಿಖೆ ನಡೆದಿದೆ’ ಎಂದು ಭಿವಂಡಿ ಜಿಲ್ಲೆಯ ಎಸ್ಪಿ ಅಮನ್ದೀಪ್ ಸಿಂಗ್ ಕಪೂರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.