ADVERTISEMENT

ಬುಲಂದ್‌ಶಹರ್‌ ಹಿಂಸಾಚಾರ: ಪ್ರಮುಖ ಆರೋಪಿ ಬಂಧನ

ಪಿಟಿಐ
Published 10 ಜನವರಿ 2019, 20:16 IST
Last Updated 10 ಜನವರಿ 2019, 20:16 IST

ಮೀರಟ್‌ (ಉತ್ತರ ಪ್ರದೇಶ): ಬುಲಂದ್‌ಶಹರ್‌ನಲ್ಲಿ ಕಳೆದ ತಿಂಗಳು ಪೊಲೀಸ್‌ ಠಾಣೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಸ್ಥಳೀಯ ಮುಖಂಡ ಶಿಖರ್‌ ಅಗರ್‌ವಾಲ್‌ ಅಲಿಯಾಸ್‌ ಶೇಖರ್‌ನನ್ನು (25) ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಇನ್‌ಸ್ಪೆಕ್ಟರ್ ಮತ್ತು ನಾಗರಿಕ ಮೃತಪಟ್ಟಿದ್ದ ಘಟನೆಯಲ್ಲಿ ಗುಂಪನ್ನು ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪ ಈತನ ಮೇಲಿತ್ತು.

ಸುಮಾರು ದಿನಗಳಿಂದ ತಲೆ ಮರೆಸಿಕೊಂಡಿದ್ದ ಈತನನ್ನು ಪೊಲೀಸರು ಹಾಪುರ್‌ ಜಿಲ್ಲೆ ಬಳಿ ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ
ಬಂಧನಕ್ಕೊಳಗಾದವರ ಸಂಖ್ಯೆ 36ಕ್ಕೆ ಏರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.