ADVERTISEMENT

ದಾಭೋಲ್ಕರ್‌ ಹತ್ಯೆ: ಆಯುಧ ಪತ್ತೆಗೆ ಸಿದ್ಧತೆ

ಪಿಟಿಐ
Published 9 ಆಗಸ್ಟ್ 2019, 18:28 IST
Last Updated 9 ಆಗಸ್ಟ್ 2019, 18:28 IST
ನರೇಂದ್ರ ದಾಭೋಲ್ಕರ್‌ 
ನರೇಂದ್ರ ದಾಭೋಲ್ಕರ್‌    

ಮುಂಬೈ:ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಗೆ ಬಳಸಲಾದ ಆಯುಧ ಪತ್ತೆಗೆ, ವಿದೇಶಿ ತನಿಖಾ ಸಂಸ್ಥೆಯ ಸಹಾಯ ಪಡೆಯಲಾಗುತ್ತಿದೆ ಎಂದು ಕೇಂದ್ರ ತನಿಖಾ ದಳ(ಸಿಬಿಐ)ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎಸ್‌.ಸಿ.ಧರ್ಮಾಧಿಕಾರಿ ಮತ್ತು ಜಿ.ಎಸ್.ಪಾಟೀಲ್‌ ಅವರಿದ್ದ ಪೀಠಕ್ಕೆ ಈ ಮಾಹಿತಿ ನೀಡಿದ ಸಿಬಿಐ ಕಾನ್ಸೂಲ್‌ ಅನಿಲ್‌ ಸಿಂಗ್‌, ‘ವಿದೇಶಿ ಸಂಸ್ಥೆಯ ತಜ್ಞರು ಭಾನುವಾರ ಆಗಮಿಸಲಿದ್ದಾರೆ. ಪ್ರಕ್ರಿಯೆ ಪೂರ್ಣಗೊಳ್ಳಲು 30 ದಿನವಾಗಲಿದೆ’ ಎಂದರು. ಆರೋಪಿಗಳು ಆಯುಧವನ್ನು ಸಮುದ್ರಕ್ಕೆ ಎಸೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT