ನವದೆಹಲಿ: ದೆಹಲಿ ವಿಧಾನಸಭೆ ಬಜೆಟ್ ಅಧಿವೇಶನವು ಮಾರ್ಚ್ 17 ರಂದು ಪ್ರಾರಂಭಗೊಳ್ಳಲಿದ್ದು, ಮಾರ್ಚ್ 21ರಂದು ಬಜೆಟ್ ಮಂಡನೆಯಾಗಲಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಸಿಸೋಡಿಯಾ ಅವರು ಬಂಧನಕೊಳ್ಳಗಾದ ಬಳಿಕ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ಹಣಕಾಸು ಖಾತೆ ವಹಿಸಿಕೊಂಡಿರುವ ಕಂದಾಯ ಸಚಿವ ಕೈಲಾಷ್ ಗಹ್ಲೋಟ್ ಈ ಬಾರಿ ಬಜೆಟ್ ಮಂಡನೆ ಮಾಡಲಿದ್ದಾರೆ.
ದೆಹಲಿ ವಿಧಾನಸಭೆ ಬಜೆಟ್ ಅಧಿವೇಶನ ಮಾರ್ಚ್ 17ರಂದು ಆರಂಭವಾಗಲಿದೆ. ಮಾರ್ಚ್ 21ರಂದು ಬಜೆಟ್ ಮಂಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಸಾಲಿನ ಬಜೆಟ್ ಅನ್ನು ಸಿಸೋಡಿಯಾ ಮಂಡಿಸಿದ್ದರು.
ಇವನ್ನೂ ಓದಿ: ನೆಲಬಾಂಬ್ ಸ್ಫೋಟ : ಸೇನಾ ಸಿಬ್ಬಂದಿಗೆ ಗಾಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.