ADVERTISEMENT

ಬ್ರಿಜ್‌ಭೂಷಣ ಪ್ರಕರಣ | ಅ.6ಕ್ಕೆ ಆದೇಶ ಪ್ರಕಟಿಸಲಿರುವ ದೆಹಲಿ ಕೋರ್ಟ್‌

ಬ್ರಿಜ್‌ಭೂಷಣ ಸಿಂಗ್‌ ವಿರುದ್ಧದ ಪ್ರಕರಣ ಮುಕ್ತಾಯ ಕೋರಿ ಪೊಲೀಸರ ವರದಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 13:49 IST
Last Updated 6 ಸೆಪ್ಟೆಂಬರ್ 2023, 13:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ ಶರಣ್‌ ಸಿಂಗ್‌ ವಿರುದ್ಧ ಅಪ್ರಾಪ್ತ ವಯಸ್ಕಳಾದ ಕುಸ್ತಿಪಟು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ಮುಕ್ತಾಯಗೊಳಿಸಿ ದೆಹಲಿ ಪೊಲೀಸರು ಸಲ್ಲಿಸಿರುವ ವರದಿಯನ್ನು ಒಪ್ಪಿಕೊಳ್ಳುವ ಕುರಿತು ದೆಹಲಿ ಕೋರ್ಟ್‌ ಅಕ್ಟೋಬರ್ 6ರಂದು ಆದೇಶ ಪ್ರಕಟಿಸಲಿದೆ.

ಅರ್ಜಿ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶೆ ಛವಿ ಕಪೂರ್‌ ಅವರು ಬುಧವಾರವೇ ಆದೇಶ ಹೊರಡಿಸಬೇಕಿತ್ತು. ‘ಆದೇಶ ಇನ್ನೂ ಸಿದ್ಧಗೊಳ್ಳದಿರುವ ಕಾರಣ ಅಕ್ಟೋಬರ್‌ 6ಕ್ಕೆ ಪ್ರಕರಣವನ್ನು ಮುಂದೂಡಲಾಗಿದೆ’ ಎಂದು ಅವರು ಪ್ರಕಟಿಸಿದರು.

ADVERTISEMENT

ಅಪ್ರಾಪ್ತ ವಯಸ್ಕಳಾದ ಕುಸ್ತಿಪಟು ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಪೊಲೀಸರು ಜೂನ್‌ 15ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.