ನವದೆಹಲಿ: ಪಂಚತಾರಾ ಹೋಟೆಲ್ ಬಳಿ ಗನ್ ಹಿಡಿದು ತಿರುಗಾಡಿದ್ದ ಬಿಎಸ್ಪಿಯ ಮಾಜಿ ಸಂಸದ ರಾಕೇಶ್ ಪಾಂಡೆ ಪುತ್ರ ಆಶಿಶ್ ಪಾಂಡೆ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂಧರ್ ಸಿಂಗ್ ಜಾಮೀನು ಮಂಜೂರು ಮಾಡಿದ್ದು, ವೈಯಕ್ತಿಕ ಬಾಂಡ್ ₹50 ಸಾವಿರ ಮತ್ತು ಅಷ್ಟೇ ಮೊತ್ತದ ಶೂರಿಟಿ ತೆಗೆದುಕೊಂಡಿದೆ.
ಅಶಿಶ್ ಅ.18ರಂದು ದೆಹಲಿ ಹೈಕೋರ್ಟ್ಗೆ ಶರಣಾಗಿದ್ದರು. ಬಳಿಕ ಹೈಕೋರ್ಟ್ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು.
ಪಂಚತಾರಾ ಹೋಟೆಲ್ ಬಳಿ ಗನ್ ಹಿಡಿದು ಬೆದರಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಕ್ಟೋಬರ್ 14ರಂದು ಹೊಟೇಲ್ನಲ್ಲಿ ಪಾರ್ಟಿ ಬಳಿಕ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿತ್ತು.
***
ಇವನ್ನೂ ಓದಿ...
ಪಂಚತಾರಾ ಹೊಟೇಲ್ ಬಳಿ ಗನ್ ಹಿಡಿದು ಬೆದರಿಕೆ ಹಾಕಿದ ಮಾಜಿ ಸಂಸದನ ಪುತ್ರ
ಆಶಿಶ್ ಪಾಂಡೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ
ಗನ್ ಹಿಡಿದು ಬೆದರಿಸಿದ್ದ ಬಿಎಸ್ಪಿ ನಾಯಕನ ಪುತ್ರ ಆಶಿಶ್ ಪಾಂಡೆ ಶರಣು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.