ADVERTISEMENT

ದೆಹಲಿ ಗಲಭೆ ಪ್ರಕರಣ: ತನಿಖೆ ಚುರುಕಿಗೆ ಸೂಚನೆ

ಪಿಟಿಐ
Published 7 ಸೆಪ್ಟೆಂಬರ್ 2021, 14:49 IST
Last Updated 7 ಸೆಪ್ಟೆಂಬರ್ 2021, 14:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆ ಪ್ರಕರಣ ಕುರಿತ ತನಿಖೆಯಲ್ಲಿ ನಿರ್ಲಕ್ಷ್ಯಿತ ವರ್ತನೆ ಸಲ್ಲದು ಎಂದು ತರಾಟೆ ತೆಗೆದುಕೊಂಡಿರುವ ಕೋರ್ಟ್‌, ತ್ವರಿತ ಮತ್ತು ನ್ಯಾಯಯುತ ತನಿಖೆ ಕೈಗೊಳ್ಳಬೇಕು ಎಂದು ಪೊಲೀಸ್‌ ಕಮಿಷನರ್‌ಗೆ ಸೂಚಿಸಿದೆ.

ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆದ ಅರುಣ್‌ ಕುಮಾರ್ ಗರ್ಗ್ ಅವರು, ಗಲಭೆ ಸಂಬಂಧ ಬಂಧಿಸಲಾಗಿರುವ ದಿನೇಶ್ ಯಾದವ್ ಕುರಿತ ಪ್ರಕರಣದ ವಿಚಾರಣೆ ವೇಳೆ ಈ ಮಾತು ಹೇಳಿದರು. ಮೂರು ವಾರಗಳಲ್ಲಿ ಪೂರಕ ಆರೋಪಪಟ್ಟಿ ದಾಖಲಿಸಬೇಕು ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT