ADVERTISEMENT

ಭಾರತಕ್ಕೆ ದ್ರೋಹ ಮಾಡಬೇಡಿ: ರಾಹುಲ್ ಗಾಂಧಿಗೆ ಅನುರಾಗ್‌ ಠಾಕೂರ್‌

ಪಿಟಿಐ
Published 6 ಮಾರ್ಚ್ 2023, 16:28 IST
Last Updated 6 ಮಾರ್ಚ್ 2023, 16:28 IST
ಅನುರಾಗ್‌ ಠಾಕೂರ್‌
ಅನುರಾಗ್‌ ಠಾಕೂರ್‌   

ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಅಮೆರಿಕ ಮತ್ತು ಯೂರೋಪ್‌ ರಾಷ್ಟ್ರಗಳು ಮಧ್ಯಪ್ರವೇಶಿಸಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ‘ದೇಶಕ್ಕೆ ದ್ರೋಹ ಮಾಡಬೇಡಿ’ ಎಂದು ಸೋಮವಾರ ಹೇಳಿದ್ದಾರೆ.

ಭಾರತದ ವಿದೇಶಾಂಗ ನೀತಿಗೆ ಆಕ್ಷೇಪಣೆ ಎತ್ತಿರುವುದು ರಾಹುಲ್‌ ಅವರ ಅಲ್ಪ ತಿಳಿವಳಿಕೆಗೆ ಸಾಕ್ಷಿಯಾಗಿದೆ. ವಿದೇಶಿ ನೆಲದಲ್ಲಿ ನಿಂತು ನೀವು ಭಾರತದ ಬಗ್ಗೆ ಹರಡುವ ಸುಳ್ಳುಗಳನ್ನು ಯಾರೂ ನಂಬುವುದಿಲ್ಲ ಎಂದೂ ಠಾಕೂರ್ ಅವರು ತಿಳಿಸಿದ್ದಾರೆ.

‘ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ರಾಹುಲ್‌ ಅವರು ಭಾರತವನ್ನು ಅಪಮಾನಿಸುತ್ತಿದ್ದಾರೆ’ ಎಂದೂ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.