ADVERTISEMENT

ರೈತರ ಪ್ರತಿಭಟನೆಯನ್ನು ಮತ್ತೊಂದು ಶಾಹೀನ್‌ಬಾಗ್‌ ಮಾಡಬೇಡಿ: ಬಿಜೆಪಿ

ಪಿಟಿಐ
Published 3 ಫೆಬ್ರುವರಿ 2021, 11:40 IST
Last Updated 3 ಫೆಬ್ರುವರಿ 2021, 11:40 IST
ಭುವನೇಶ್ವರ ಕಲಿತಾ
ಭುವನೇಶ್ವರ ಕಲಿತಾ   

ನವದೆಹಲಿ: ನೂತನ ಕೃಷಿ ಕಾಯ್ದೆಗಳ ಕುರಿತು ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಯಾವಾಗಲೂ ಸಿದ್ಧ. ಆದರೆ, ರೈತರ ಪ್ರತಿಭಟನೆ ಮತ್ತೊಂದು ಶಾಹೀನ್‌ಬಾಗ್‌ ಆಗಿಸಬಾರದು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಬಿಜೆಪಿ ಬುಧವಾರ ಹೇಳಿದೆ.

ರಾಷ್ಟ್ರಪತಿಗಳ ಭಾಷಣಕ್ಕೆ ವಂದಿಸುವ ನಿರ್ಣಯದ ಮೇಲೆ ಮಾತನಾಡಿದ ಬಿಜೆಪಿ ಸಂಸದ ಭುವನೇಶ್ವರ ಕಲಿತಾ, ಸರ್ಕಾರಕ್ಕೆ ರೈತರ ಬಗ್ಗೆ ಗೌರವ ಇದೆ. ಮಾತುಕತೆಗೆ ಅವರಿಗೆ ಯಾವಾಗಲೂ ಬಾಗಿಲು ತೆರೆದಿರುತ್ತದೆ ಎಂದರು.

‘ನೂತನ ಕೃಷಿ ಕಾಯ್ದೆಗಳ ಮೂಲಕ ರೈತರಿಗೆ ಹೊಸ ಹಕ್ಕುಗಳನ್ನು ಸರ್ಕಾರ ನೀಡಿದೆ. ಸಂಸತ್‌ನಲ್ಲಿ ವಿಸ್ತೃತ ಚರ್ಚೆ ನಡೆಸಿದ ನಂತರವೇ ಈ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಅವರಿಗಿರುವ ಯಾವ ಸೌಲಭ್ಯಗಳನ್ನೂ ಈ ಕಾಯ್ದೆಗಳ ಮೂಲಕ ಕಿತ್ತುಕೊಂಡಿಲ್ಲ’ ಎಂದು ಹೇಳಿದರು.

ADVERTISEMENT

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.