ADVERTISEMENT

ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ವಿರುದ್ಧ ಮತ ಸಮೀಕ್ಷೆ: ಮಾಳವೀಯಗೆ ತರಾಟೆ

ಪಿಟಿಐ
Published 28 ಡಿಸೆಂಬರ್ 2019, 19:45 IST
Last Updated 28 ಡಿಸೆಂಬರ್ 2019, 19:45 IST

ನವದೆಹಲಿ: ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಅವರ ವಿರುದ್ಧ ಆನ್‌ಲೈನ್ ಮತ ಸಮೀಕ್ಷೆ ನಡೆಸಿದ್ದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರನ್ನು ಶನಿವಾರ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತರಾಟೆಗೆ ತೆಗೆದುಕೊಂಡಿದ್ದು, ಮಾಳವೀಯ ಕೂಡಲೇ ಆನ್‌ಲೈನ್ ಮತ ಸಮೀಕ್ಷೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದೆ.

ಶುಕ್ರವಾರ ಮಾಳವೀಯ ಟ್ವಿಟರ್‌ ನಲ್ಲಿ ‘ರಾಜ್‌ದೀಪ್ ಸರ್‌ ದೇಸಾಯಿ ಅವರು ಐಸಿಸ್‌ ಪಿಆರ್ ಆಗಿ ಕಾರ್ಯ
ನಿರ್ವಹಿಸಬೇಕೇ?’ ಎಂದು ಆನ್‌ಲೈನ್‌ನಲ್ಲಿ ಮತ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಗಾಗಿ ಟ್ವಿಟರ್ ಬಳಕೆದಾರರಿಗೆ ಮತ ಚಲಾಯಿಸಲು ಒಪ್ಪಿಗೆ, ಬಲವಾಗಿ ಒಪ್ಪಿಗೆ, ಒಪ್ಪುವುದಿಲ್ಲ, ಅಪ್ರಸ್ತುತ ಎನ್ನುವ ನಾಲ್ಕು ಆಯ್ಕೆಗಳನ್ನು ಮಾಳವೀಯ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT