ADVERTISEMENT

ಇಎಸ್‌ಐ ಕಾಯ್ದೆ ವ್ಯಾಖ್ಯಾನಿಸುವಾಗ ಉದಾರತೆ ತೋರಿ: ‘ಸುಪ್ರೀಂ’

ಪಿಟಿಐ
Published 20 ಜನವರಿ 2023, 20:08 IST
Last Updated 20 ಜನವರಿ 2023, 20:08 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಕಾರ್ಮಿಕರ ರಾಜ್ಯ ವಿಮಾ ಕಾಯ್ದೆಯನ್ನು (ಇಎಸ್‌ಐ) ವ್ಯಾಖ್ಯಾನಿಸುವಾಗ ಉದಾರತೆ ತೋರಬೇಕು. ಆ ಮೂಲಕ ನೌಕರರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು ಸಾಧ್ಯವಾಗಿರಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ.

ಅರ್ಜಿಯೊಂದರ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠ, ‘ಸಮಾಜ ಕಲ್ಯಾಣ ಉದ್ದೇಶದಿಂದ ಜಾರಿಗೊಳಿಸಿರುವ ಶಾಸನ ಇದಾಗಿರುವ ಕಾರಣ, ಕಾಯ್ದೆಯ ವ್ಯಾಖ್ಯಾನವು ಫಲಾನುಭವಿಗೆ ಅನುಕೂಲವಾಗುವಂತೆ ಇರಬೇಕು’ ಎಂದು ಹೇಳಿತು.

ತೆಲಂಗಾಣದ ಸಿನಿಮಾ ಮಂದಿರವೊಂದಕ್ಕೆ ‘ಡಿಮ್ಯಾಂಡ್‌ ನೋಟಿಸ್’ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಾರ್ಮಿಕರ ವಿಮಾ ನ್ಯಾಯಾಲಯವು ವಜಾಗೊಳಿಸಿ ಆದೇಶಿಸಿತ್ತು. ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕಾರ್ಮಿಕರ ವಿಮಾ ನ್ಯಾಯಾಲ
ಯದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿತ್ತು.

ADVERTISEMENT

ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಇಎಸ್‌ಐ ನಿಗಮವು ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ನ್ಯಾಯಪೀಠ, ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.