ಪಿಟಿಐ
ನವದೆಹಲಿ: ‘ಆಪರೇಷನ್ ಸಿಂಧೂ’ ಕಾರ್ಯಾಚರಣೆ ಮೂಲಕ ಇರಾನ್ ಮತ್ತು ಇಸ್ರೇಲ್ನಿಂದ ಇಲ್ಲಿಯವರೆಗೆ 4,415 ಭಾರತೀಯರನ್ನು ಕರೆತರಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಸೇನಾ ಸಂಘರ್ಷದಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಜೂನ್ 18ರಂದು ‘ಆಪರೇಷನ್ ಸಿಂಧೂ’ ಕಾರ್ಯಾಚರಣೆಯನ್ನು ಭಾರತ ಸರ್ಕಾರ ಆರಂಭಿಸಿತು.
ಇರಾನ್ನಿಂದ ಗುರುವಾರ ತಡರಾತ್ರಿ ದೆಹಲಿಗೆ ಬಂದ ವಿಮಾನದಲ್ಲಿ 173 ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ಎಂಇಎ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
‘ಆಪರೇಷನ್ ಸಿಂಧೂ’ ಕಾರ್ಯಾಚರಣೆ ಮೂಲಕ ಇರಾನ್ನಿಂದ 3,597 ಹಾಗೂ ಇಸ್ರೇಲ್ನಿಂದ 818 ಮಂದಿ ಸೇರಿದಂತೆ ಈವರೆಗೂ 4,415 ಭಾರತೀಯರನ್ನು ಕರೆತರಲಾಗಿದೆ. ಇದಕ್ಕಾಗಿ 19 ವಿಶೇಷ ವಿಮಾನಗಳು ಹಾಗೂ ವಾಯುಪಡೆಯ ಮೂರು ವಿಮಾನಗಳನ್ನು ಬಳಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದೆ.
ಇದಲ್ಲದೆ 14 ವಿದೇಶಿಯರನ್ನು ಕರೆತರಲಾಗಿದೆ. ಇದರಲ್ಲಿ ನೇಪಾಳದ ಒಂಬತ್ತು, ಶ್ರೀಲಂಕಾದ ನಾಲ್ವರು ಮತ್ತು ಭಾರತೀಯ ಪ್ರಜೆಯೊಬ್ಬರ ಇರಾನ್ ಮೂಲದ ಪತ್ನಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.