ADVERTISEMENT

ದನ ಸಾಗಿಸಿದ ಐವರನ್ನು ನನ್ನ ಕಡೆಯವರು ಕೊಂದಿದ್ದಾರೆ ಎಂದ ಬಿಜೆಪಿ ನಾಯಕನ ಮೇಲೆ ಕೇಸು

ಪಿಟಿಐ
Published 21 ಆಗಸ್ಟ್ 2022, 11:13 IST
Last Updated 21 ಆಗಸ್ಟ್ 2022, 11:13 IST
ಗ್ಯಾನ್ ದೇವ್‌ ಅಹುಜಾ
ಗ್ಯಾನ್ ದೇವ್‌ ಅಹುಜಾ   

ಜೈಪುರ: ದ್ವೇಷ ಹರಡುವ ಹೇಳಿಕೆ ನೀಡಿರುವ ಆರೋಪದಲ್ಲಿ ರಾಜಸ್ಥಾನದ ಬಿಜೆಪಿಯ ಮಾಜಿ ಶಾಸಕ ಗ್ಯಾನ್ ದೇವ್‌ ಅಹುಜಾ ವಿರುದ್ಧ ಅಲ್ವಾರ್‌ನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ತನ್ನ ಬೆಂಬಲಿಗರು ಇದುವರೆಗೆ ದನ ಕಳ್ಳಸಾಗಣೆ ಮಾಡುತ್ತಿದ್ದ ಐದು ಮಂದಿಯನ್ನು ಹತ್ಯೆ ಮಾಡಿದ್ದಾರೆ’ ಎಂದು ಗ್ಯಾನ್ ದೇವ್‌ ಹೇಳಿರುವ ವಿಡಿಯೊ ಬಹಿರಂಗಗೊಂಡಿತ್ತು.

‘ಟ್ಯಾಕ್ಟರ್‌ ಕಳ್ಳತನ ಶಂಕೆಯ ಮೇರೆಗೆ ಮುಸ್ಲಿಂ ಸಮುದಾಯದವರು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಚಿರಂಜಿಲಾಲ್ ಸೈನಿ ಎಂಬುವವರ ಮನೆಗೆ ಭೇಟಿ ನೀಡಿದ್ದ ವೇಳೆ ಶಾಸಕರು ದ್ವೇಷ ಹರಡುವ ಹೇಳಿಕೆ ನೀಡಿದ್ದರು. ಇದು ವಿಡಿಯೊದಲ್ಲಿ ದಾಖಲಾಗಿತ್ತು. ಈ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.