ADVERTISEMENT

ಜಾರ್ಖಂಡ್: ಇಬ್ಬರು ಪೊಲೀಸರ ಕತ್ತು ಸೀಳಿದ ನಕ್ಸಲರು, ಮಾಜಿ ಶಾಸಕ ಪಾರು

ಪಿಟಿಐ
Published 4 ಜನವರಿ 2022, 18:54 IST
Last Updated 4 ಜನವರಿ 2022, 18:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೈಬಾಸಾ, ಜಾರ್ಖಂಡ್: ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಮಂಗಳವಾರ ನಕ್ಸಲರು ದಾಳಿ ನಡೆಸಿದ್ದು, ಬಿಜೆಪಿಯ ಮಾಜಿ ಶಾಸಕ ಗುರುಚರಣ್ ನಾಯಕ್ ಪಾರಾಗಿದ್ದಾರೆ.

ಆದರೆ, ಶಾಸಕರ ಅಂಗರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳ ಕತ್ತನ್ನು ಸೀಳಿರುವ ನಕ್ಸಲರು, ಮೂರು ಎಕೆ–47 ರೈಫಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ನಿಷೇಧಿತ ಸಂಘಟನೆ ಸಿಪಿಐಗೆ(ಮಾವೊವಾದಿ) ಸೇರಿದ ಸದಸ್ಯರು ಈ ದಾಳಿ ನಡೆಸಿದ್ದಾರೆ. ಗೋಯಿಕೇರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಝೀಲ್‌ರುವಾ ಗ್ರಾಮದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಮಾಜಿ ಶಾಸಕ ನಾಯಕ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ಪಂದ್ಯ ಮುಗಿದ ನಂತರ, ವೀಕ್ಷಕರ ನಡುವೆ ಕುಳಿತಿದ್ದ ನಕ್ಸಲರು ಏಕಾಏಕಿ ದಾಳಿ ನಡೆಸಿದ್ದಾರೆ’ ಎಂದು ಚಕ್ರಧರಪುರದ ಪೊಲೀಸ್‌ ಅಧಿಕಾರಿ ದಿಲೀಪ್‌ ಖಾಲ್ಖೊ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.