ADVERTISEMENT

ರಾಜ್ಯಸಭೆಯಲ್ಲಿ ಕೊನೇ ಸಾಲಿನ ಆಸನಕ್ಕೆ ಸ್ಥಳಾಂತರಗೊಂಡ ಮನಮೋಹನ್‌ ಸಿಂಗ್‌

ಪಿಟಿಐ
Published 2 ಫೆಬ್ರುವರಿ 2023, 16:01 IST
Last Updated 2 ಫೆಬ್ರುವರಿ 2023, 16:01 IST
.
.   

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರನ್ನು ರಾಜ್ಯಸಭೆಯ ಮುಂದಿನ ಸಾಲಿನ ಆಸನದಿಂದ ಕೊನೆಯ ಸಾಲಿನ ಆಸನಕ್ಕೆ ಸ್ಥಳಾಂತರಗೊಳಿಸಲಾಗಿದೆ. ಮನಮೋಹನ ಸಿಂಗ್ (90) ಅವರ ಗಾಲಿಕುರ್ಚಿಯ ಚಲನೆಗೆ ಅನುಕೂಲವಾಗಲೆಂದು ಈ ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪಕ್ಷ ಗುರುವಾರ ತಿಳಿಸಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ, ದಿಗ್ವಿಜಯ ಸಿಂಗ್‌ ಅವರು ಆಸನ ಹಂಚಿಕೆಯ ನಂತರ ಮುಂದಿನ ಸಾಲಿನಲ್ಲಿ ಆಸನ ಪಡೆದಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಮೊದಲಿನ ಸ್ಥಾನದಲ್ಲಿ ಆಸೀನರಾಗಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT